News Kannada
Saturday, June 03 2023
ಮಂಗಳೂರು

ಪಾವೂರು–ಉಳಿಯ: ಮಳೆ ಶುರುವಾಗುತ್ತಲೇ ದ್ವೀಪವಾಸಿಗಳಿಗೆ ಕಳವಳ, ದೋಣಿಯೇ ಗತಿ

Pavoor-Illa: Islanders worried as it rains, boat is on the move
Photo Credit : News Kannada

ಮಂಗಳೂರು: ನೇತ್ರಾವತಿ ನದಿಯಲ್ಲಿ ರುವ ಪಾವೂರು–ಉಳಿಯ ದ್ವೀಪ ವಾಸಿಗಳಿಗೆ ಮಳೆಗಾಲ ಸಮೀಪಿಸುತ್ತಲೇ ಕಳವಳ ಶುರುವಾಗುತ್ತದೆ. ನದಿಯಲ್ಲಿ ನಿರ್ಮಿಸಿರುವ ತಾತ್ಕಾಲಿಕ ಪಾದಚಾರಿ ಸೇತುವೆಯನ್ನು ನೇತ್ರಾವತಿಯಲ್ಲಿ ನೀರಿನ ಮಟ್ಟ ಹೆಚ್ಚುವ ಮುನ್ನವೇ ಬಿಚ್ಚಿಡಬೇಕು. ಇಲ್ಲದಿದ್ದರೆ, ಪ್ರವಾಹದಲ್ಲಿ ಅದು ಕೊಚ್ಚಿ ಹೋಗುತ್ತದೆ.

ಮಳೆಗಾಲದಲ್ಲಿ ನದಿ ದಾಟಲು ದೋಣಿಯೇ ಗತಿ. ಹಾಗಾಗಿ ಮಳೆಗಾಲ ಇವರಿಗೆ ದುಃಸ್ವಪ್ನವಿದ್ದಂತೆ.

ನಗರದಿಂದ ಕೇವಲ 8 ಕಿ.ಮೀ. ದೂರದಲ್ಲಿದೆ ಪಾವೂರು–ಉಳಿಯ ದ್ವೀಪ. ಇಲ್ಲಿ 52 ಕುಟುಂಬಗಳು ನೆಲೆಸಿವೆ. ಈ ದ್ವೀಪ ನದಿಯ ದಕ್ಷಿಣ ದಿಕ್ಕಿನಲ್ಲಿರುವ ಹರೇಕಳ ಗ್ರಾಮ ಪಂಚಾಯಿತಿಗೆ ಸೇರಿದ್ದರೂ, ಇಲ್ಲಿನ ನಿವಾಸಿಗಳು ದೈನಂದಿನ ವ್ಯವಹಾರಗಳಿಗೆ ಪಶ್ಚಿಮ ದಿಕ್ಕಿನಲ್ಲಿರುವ ಮಂಗಳೂರು ನಗರವನ್ನೇ ನೆಚ್ಚಿಕೊಂಡಿದ್ದಾರೆ.

ಮಂಗಳೂರಿಗೆ ಹೋಗಲು ಇಲ್ಲಿನ ನಿವಾಸಿಗಳು ದೋಣಿಯನ್ನು ಬಳಸುತ್ತಿದ್ದರು. ‌ದಶಕಗಳ ಹಿಂದೆ ಇಲ್ಲಿನ ನಿವಾಸಿಗಳು ನೇತ್ರಾವತಿಯಲ್ಲಿ ನೀರಿನ ಹರಿವು ಕಡಿಮೆಯಾ‌‌‌ದ ಬಳಿಕ, ಮರದ ಕಂಬಗಳನ್ನು ಬಳಸಿ ಸೇತುವೆ ನಿರ್ಮಿಸುತ್ತಿದ್ದರು. ಮರಳುಗಾರಿಕೆ ಹೆಚ್ಚಾದಂತೆ ನದಿಪಾತ್ರವೂ ಅಗಲವಾಯಿತು. 450 ಅಡಿ ಉದ್ದದ ಸೇತುವೆ ಬದಲು 900 ಅಡಿ ಉದ್ದದ ಸೇತುವೆ ನಿರ್ಮಿಸಬೇಕಾದ ಸ್ಥಿತಿ ನಿರ್ಮಾಣವಾಯಿತು. ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಸೇತುವೆ ನಿರ್ಮಿಸುವುದನ್ನೇ ಬಿಟ್ಟುಬಿಟ್ಟಿದ್ದರು.

‘ಈ ದ್ವೀಪದ ಇನ್ಫೆಂಟ್‌ ಜೀಸಸ್‌ ಚರ್ಚ್‌ನ ಪಾದ್ರಿಯಾಗಿದ್ದ ಫಾ.ಜೆರಾಲ್ಡ್‌ ಲೋಬೊ ಅವರು, ಊರಿನವರ ಕಷ್ಟ ಕಂಡು ದಾನಿಗಳ ನೆರವಿನಿಂದ ತಾತ್ಕಾಲಿಕ ಸೇತುವೆ ನಿರ್ಮಿಸಲು ಕಬ್ಬಿಣದ ಪೈಪ್‌ಗಳು ಹಾಗೂ ಹಲಗೆಗಳ ವ್ಯವಸ್ಥೆ ಮಾಡಿದ್ದರು. ಸುಮಾರು ₹18 ಲಕ್ಷ ದಲ್ಲಿ ಐದು ವರ್ಷಗಳ ಹಿಂದೆ ತಾತ್ಕಾಲಿಕ ಸೇತುವೆ ನಿರ್ಮಿಸಿದೆವು’ ಎಂದು ಸ್ಥಳೀಯ ರಾದ ಗಿಲ್ಬರ್ಟ್‌ ಡಿಸೋಜ ತಿಳಿಸಿದರು.

ಇನ್ನು ತಾತ್ಕಾಲಿಕ ಸೇತುವೆ ಇರದು?

‘ಪಾವೂರು–ಉಳಿಯ ದ್ವೀಪದ ಪಶ್ಚಿಮ ದಿಕ್ಕಿನಲ್ಲಿ ನೇತ್ರಾವತಿ ನದಿಗೆ ಹೊಸ ಅಣೆಕಟ್ಟು ನಿರ್ಮಿಸ ಲಾಗಿದೆ. ಅದರ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಅಣೆಕಟ್ಟೆಯಲ್ಲಿ ನೀರು ಸಂಗ್ರಹಿಸಲು ಶುರು ಮಾಡಿದರೆ ನಾವು ದ್ವೀಪಕ್ಕೆ ಸೇತುವೆ ನಿರ್ಮಿಸುವ ಜಾಗದಲ್ಲಿ ನೀರಿನ ಮಟ್ಟ ಈಗಿನದಕ್ಕಿಂತ 3 ಮೀಟರ್‌ಗಳಷ್ಟು ಹೆಚ್ಚಾಗಲಿದೆ. ಆಗ ಇಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಲು ಸಾಧ್ಯವಾಗದು. ನಮ್ಮ ದ್ವೀಪಕ್ಕೆ ಪ್ರತ್ಯೇಕ ಕಾಂಕ್ರೀಟ್‌ ಸೇತುವೆ ನಿರ್ಮಿಸಿ ಕೊಡದಿದ್ದರೆ ವರ್ಷಪೂರ್ತಿ ನದಿ ದಾಟಲು ದೋಣಿಯೇ ಗತಿ’

See also  ಹಾಸನ: ಎನ್‌ಇಪಿ ಶಿಕ್ಷಣ ನೀತಿಯನ್ನು ಗಂಭೀರವಾಗಿ ಪರಿಗಣಿಸಿ- ಬಿ.ಸಿ ನಾಗೇಶ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು