ಮಂಗಳೂರು: ಇಂದು ಸತ್ಯ ಮತ್ತು ಅಸತ್ಯದ ನಡುವೆ ನಡುವೆ ಚುನಾವಣೆ ಚುನಾವಣೆ ನಡೆಯುತ್ತಿದೆ. ಮುಂದಿನ ಐದು ದಿನಗಳು ನನಗಾಗಿ ನೀವು ಕೆಲಸ ಮಾಡಿದಲ್ಲಿ ಮುಂದಿನ ಐದು ವರ್ಷ ನಾನು ನಿಮಗಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಉಳ್ಳಾಲ ವ್ಯಾಪ್ತಿಯ ಬೋಳಿಯಾರ್ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಜನವಿರೋಧಿ, ದ್ವೇಷ ಪೂರಿತ ಅಜೆಂಡಾ ಹೊಂದಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ಚುನಾವಣೆ ಎಂದರು. ಪ್ರತಿ ಮನೆಯ ಸದಸ್ಯರು ಇಂತಹ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಪಣತೊಡಬೇಕು ಎಂದು ಅವರು ಹೇಳಿದರು. ಯಾವುದೇ ನಿರ್ದಿಷ್ಟ ಕಾರ್ಯಕ್ರಮ ನೀಡದೆ ಜನರ ಮೇಲೆ ದುಬಾರಿ ತೆರಿಗೆ ಹೇರಿರುವ ಬಿಜೆಪಿ ಸರ್ಕಾರದ ದುಷ್ಟ ಆಡಳಿತಕ್ಕೆ ಅಂತ್ಯ ಕಾಣಿಸಬೇಕಿದೆ ಎಂದರು. ಬಿಜೆಪಿ ಸರ್ಕಾರದ ಆಯುಷ್ಯ ಮುಗಿದಿದೆ. ಸರ್ಕಾರ ವೆಂಟಿಲೇಟರ್ನಲ್ಲಿದೆ ಕೇವಲ ಐದು ದಿನಗಳಲ್ಲಿ ಅದರ ಆಯುಷ್ಯ ಮುಗಿಯಲಿದೆ ಎಂದರು.