News Karnataka Kannada
Saturday, April 27 2024
ಮಂಗಳೂರು

ಕೊಲೆ ಆರೋಪ: ಪೂಂಜಾ ವಿರುದ್ಧ ಐಜಿಗೆ ದೂರು ನೀಡಿದ ಪ್ರತಿಭಾ ಕುಳಾಯಿ

Pratibha Kulai files complaint against Poonja with IG over murder charges
Photo Credit : News Kannada

ಮಂಗಳೂರು: ಸಿದ್ದರಾಮಯ್ಯ ವಿರುದ್ಧ ಕೊಲೆ ಆರೋಪ ಮಾಡಿದ್ದ ಶಾಸಕ ಹರೀಶ್‌ ಪೂಂಜಾ ವಿರುದ್ಧ ಇಂದು ಮತ್ತೊಂದು ದೂರು ದಾಖಲಾಗಿದೆ. ಮಂಗಳೂರು ಐಜಿಗೆ ಕಾಂಗ್ರೆಸ್‌ ನಾಯಕಿ ಪ್ರತಿಭಾ ಕುಳಾಯಿ ದೂರು ನೀಡಿದ್ದಾರೆ.

ದೂರು ನೀಡಿದ ಬಳಿಕ ಹೇಳಿಕೆ ನೀಡಿರುವ ಅವರು ಹರೀಶ್ ಪೂಂಜ ಹೇಳಿಕೆಯನ್ನು ಖಂಡಿಸುತ್ತೇವೆ. ಬಿಜೆಪಿ ಶಾಸಕರು ಯಾರನ್ನು ಬೇಕಾದರೂ ಹುಟ್ಟಿಸುತ್ತಾರೆ. ಯಾರನ್ನ ಬೇಕಾದರೂ ಸಾಯಿಸುತ್ತಾರೆ.

ಅವರಿಗೆ ಇದು ರೂಢಿಯಾಗಿ ಹೋಗಿದೆ. ಈ ಹಿಂದೆ ಉರಿ ಗೌಡ ಹಾಗೂ ನಂಜೇಗೌಡರನ್ನ ಹುಟ್ಟಿಸಿದ್ರು. ಇವರ ಮಾತು ಮತ್ತು ಮೆದುಳಿಗಿರುವ ವೈರ್ ನ್ನು ಅವರು ಕನೆಕ್ಟ್ ಮಾಡುವುದು ಒಳ್ಳೆಯದು.

ಈ ಹಿಂದೆ ಇದೇ ಪೂಂಜ ಓರ್ವ ಮಹಿಳೆಗೆ ಮೊಟ್ಟೆ ಎಸೆದು ಅವಮಾನ ಮಾಡಿದ್ದರು. ಇಂತಹ ಶಾಸಕರು ಜಿಲ್ಲೆಯಾದ್ಯಂತ ದ್ವೇಷ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಒಂದು ಕಡೆ ಮುಸಲ್ಮಾನರ ವೋಟ್ ಬೇಡ ಎಂದು ಹೇಳುವ ಪೂಂಜ ತಮ್ಮ ಗ್ಯಾಸ್ ಏಜೆನ್ಸಿಯನ್ನು ಮುಸಲ್ಮಾನ್ ವ್ಯಕ್ತಿಗೆ ಮಾರಿದ್ದರು. ವೋಟ್ ಬೇಡ ಎಂದು ಮಸೀದಿಗಳಿಗೆ ಅತೀ ಹೆಚ್ಚಿನ ಅನುದಾನ ನೀಡುತ್ತಾರೆ.
ಇಂತಹ ಶಾಸಕರನ್ನು ಏನು ಮಾಡಬೇಕು ಎಂದು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರತಿಭಾ ಕುಳಾಯಿ ಹೇಳಿಕೆ ನೀಡಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು