ಪುತ್ತೂರು: ಬಿಜೆಪಿ ರಾಜ್ಯ ಅಧ್ಯಕ್ಷರ ಹಾಗೂ ಡಿ ಸದಾನಂದ ಗೌಡರ ಭಾವಚಿತ್ರಕ್ಕೆ ಚಪ್ಪಲಿಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಆಸ್ಪತ್ರೆಗೆ ಕೆಪಿಸಿಸಿ ಕಾರ್ಯದರ್ಶಿ ಆರ್. ಪದ್ಮರಾಜ್ ಭೇಟಿ ನೀಡಿ ಹಿಂದು ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಕೆಲವು ಯುವಕರನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ಬಂಧಿಸಿ ನೇರವಾಗಿ ಡಿವೈಎಸ್ಪಿ ಕಚೇರಿಗೆ ಕರೆದೊಯ್ಯಲಾಯಿತು ಎಂದು ಗಾಯಾಳು ಅವಿನಾಶ್ ನಲ್ಲಿ ಮಾತನಾಡುವಾಗ ತಿಳಿದುಬಂತು. ಒಂದು ಬೇಲೆಬಲ್ ಪ್ರಕರಣದಲ್ಲಿ ಈ ರೀತಿಯ ಅಮಾನುಷ ಕೃತ್ಯ ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದರು.
ಮಾನವೀಯ ದೃಷ್ಟಿಯಿಂದಾದರೂ ಗಾಯಾಳುಗಳನ್ನು ಆಸ್ಪತ್ರೆಗೆ ತಂದು ದಾಖಲಿಸಿದ್ದೀರಾ ಎಂದು ಪ್ರಶ್ನೆ ಮಾಡಿದರು. ಸಾರ್ವಜನಿಕರಿಗೆ ಮಾಹಿತಿ ತಿಳಿದ ಮೇಲೆ ಎಫ್ ಐ ಆರ್ ದಾಖಲಿಸಿದರು. ಅದರಲ್ಲಿ 323, 324 , 506 ಹಾಕಿದ್ದೀರಿ. ಗಾಯದ ಆಳ 2 ಸೆಂ.ಮೀ., ಹಾಗೂ ಅವರ ಕಿವಿಯ ತಮಟೆ ಯಲ್ಲಿ ತೀವ್ರತರವಾದ ಗಾಯ ನೋಡಿದರೆ ಕಣ್ಣಿದ್ದವರಿಗೆ ಯಾರಿಗಾದ್ರು ತಿಳಿಯುತ್ತದೆ. ಘಟನೆ ನಡೆದು 10 ದಿನ ಆದ್ರೂ 326 ಹಾಕ್ಬೇಕು ಅಂತ ಅರ್ಥ ಆಗಿಲ್ಲವೇ? ಗಾಯಾಳುಗಳೇ ಡಿವೈಎಸ್ ಪಿ ಹಲ್ಲೆ ನಡೆಸಿದ್ದು ಅಂತ ಹೇಳುತ್ತಿದ್ದಾರೆ. ಇಲ್ಲಿಯ ವರೆಗೆ ಯಾವ ರೀತಿಯ ಕಾನೂನು ಕ್ರಮ ಕೈಗೊಂಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಈಗಾಗಲೇ ಸಂಪೂರ್ಣ ಮಾಹಿತಿ ಕೋರಿದೆ. ಖಂಡಿತವಾಗಿಯೂ ಈ ಪ್ರಕರಣವನ್ನು ಸರ್ಕಾರ ನಿರ್ಲಕ್ಷ್ಯ ವಹಿಸುವುದಿಲ್ಲ. ನಾನು ಈಬಗ್ಗೆ ಗಾಯಾಳುಗಳನ್ನು, ವೈದ್ಯಾಧಿಕಾರಿಗಳಲ್ಲಿ ವಿಚಾರಿಸಿದ್ದು, ಸಂಪೂರ್ಣ ಅರಿವಿಗೆ ಬಂದಿದೆ. ಇದೊಂದು ತೀವ್ರವಾದ ಗಾಯ ಎಂದು ವೈದ್ಯರು ತಿಳಿಸಿದ್ದು, ನಾನು ಎಸ್ ಪಿಯವರೊಂದಿಗೆ ಮಾತನಾಡಿ ವೈದ್ಯರು ನೀಡಿದ ಮಾಹಿತಿಯನ್ನು ತಿಳಿಸಿ ಡಿವೈಎಸ್ಪಿ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಲಾಗುವುದು ಎಂದು ವಕೀಲ ಆರ್ ಪದ್ಮರಾಜ್ ಹೇಳಿದರು.