News Karnataka Kannada
Thursday, April 25 2024
ಮಂಗಳೂರು

ಮಂಗಳೂರಿನಲ್ಲಿ ಮರುಬಳಕೆ ತ್ಯಾಜ್ಯ ಸಂಗ್ರಹ ಕೇಂದ್ರ: ಹಳೆ ಪುಸ್ತಕ, ಬಟ್ಟೆ ನೀಡಲು ಅವಕಾಶ

Mangaluru: MCC to rebuild roads damaged due to rains
Photo Credit : News Kannada

ಮಂಗಳೂರು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ವಚ್ಛ ಭಾರತ್‌ ಮಿಷನ್‌ ನಗರ 2.0 ಯೋಜನೆಯಡಿ ಆರಂಭಿಸಲಾಗಿರುವ ನನ್ನ ಲೈಫ್‌ ನನ್ನ ಸ್ವಚ್ಛ ನಗರ ಅಭಿಯಾನ ಕಾರ್ಯಕ್ರಮದಡಿ ರೀಯೂಸ್‌ (ಮರುಬಳಕೆ) ಮತ್ತು ರಿಸೈಕಲ್‌ (ಪುನರ್‌ ಬಳಕೆ) ರೆಡ್ಯೂಸ್‌ (ಕಡಿಮೆಗೊಳಿಸು) ಆರ್‌ ಆರ್‌ ಆರ್‌ ಕೇಂದ್ರವನ್ನು ಶನಿವಾರ ಲಾಲ್‌ ಭಾಗ್‌ ಮನಪಾ ಕಚೇರಿ ಆವರಣದಲ್ಲಿ ಉದ್ಘಾಟಿಸಲಾಯಿತು.

ಹಳೆಯ ಆಟಿಕೆಗಳನ್ನು ಕೇಂದ್ರಕ್ಕೆ ನೀಡುವ ಮೂಲಕ ಮೇಯರ್‌ ಜಯಾನಂದ ಅಂಚನ್‌ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಾರ್ವಜನಿಕರು ಅಭಿಯಾನದಡಿ ಬರುವ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಅಗತ್ಯವಿದ್ದವರಿಗೆ ಒದಗಿಸುವ ಮೂಲಕ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೋಗುವುದನ್ನು ತಪ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಪಾಲಿಕೆ ಆಯುಕ್ತ ಚೆನ್ನಬಸಪ್ಪ ಕೆ. ಮಾತನಾಡಿ ಬಟ್ಟೆ, ಚಪ್ಪಲಿ, ದಿನಪತ್ರಿಕೆ ಕ್ಯಾರಿಬ್ಯಾಗ್‌, ಹಳೆಯ ಪುಸ್ತಕ ಸೇರಿದಂತೆ ವಿವಿಧ ವಸ್ತುಗಳನ್ನು ಕೇಂದ್ರಕ್ಕೆನೀಡಬಹುದು ಎಂದರು.

ಆಟಿಕೆಗಳನ್ನು ಅಂಗನವಾಡಿ ಕೇಂದ್ರಗಳಿಗೆ, ಪುಸ್ತಕಗಳನ್ನು ಲೈಬ್ರೆರಿಗಳಿಗೆ ಬಟ್ಟೆಗಳನ್ನು ಅಗತ್ಯವಿರುವವರಿಗೆ ನೀಡಲಾಗುವುದು ಎಂದರು.

ಜೂನ್‌ 5ರವರೆಗೆ ಕಾರ್ಯಾಚರಣೆ
ಪಾಲಿಕೆಯ ಲಾಲ್‌ಭಾಗ್‌ ಕೇಂದ್ರ ಕಚೇರಿ, ಸುರತ್ಕಲ್‌ ವಲಯ ಕಚೇರಿ, ಮಣ್ಣಗುಡ್ಡೆ ಕಚೇರಿ, ಕಾವೂರು ಮಾರುಕಟ್ಟೆ, ಹಂಪನಕಟ್ಟೆಯ ಕುದ್ಮುಲ್‌ ರಂಗರಾವ್‌ ಪುರಭವನ, ಸುರತ್ಕಲ್‌ ಮಾಧವ ನಗರದ ಒಣತ್ಯಾಜ್ಯ ಸಂಗ್ರಹ ಕೇಂದ್ರ, ಬಜಾಲ್‌ ಒಣತ್ಯಾಜ್ಯ ಸಂಗ್ರಹ ಕೇಂದ್ರ, ತಣ್ಣೀರು ಬಾವಿ ಬೀಚ್‌ನಲ್ಲಿ ಆರ್‌ ಆರ್‌ ಆರ್‌ ಕೇಂದ್ರ ತೆರೆಯಲಾಗಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಕೇಂದ್ರ ತೆರೆದಿರುತ್ತದೆ. ತ್ಯಾಜ್ಯ ಸಂಗ್ರಾಹಕರೂ ಮನೆ ಮನೆಗಳಿಂದ ಈ ವಸ್ತುಗಳನ್ನು ಸ್ವೀಕರಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು