News Karnataka Kannada
Saturday, April 27 2024
ಮಂಗಳೂರು

ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಿ ಸಂಜಯ್ ವರ್ಮಾ ಅಧಿಕಾರ ಸ್ವೀಕಾರ

Sanjay Verma takes over as MANAGING DIRECTOR of MRPL
Photo Credit : News Kannada

ಮಂಗಳೂರು: ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಿ ( ಅಡಿಶನಲ್‌ ಚಾರ್ಜ್‌) ಸಂಜಯ್ ವರ್ಮಾ ಜೂನ್‌ 1ರಂದು ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ವರ್ಮ ಅವರು ತೈಲ ಮತ್ತು ಅನಿಲ ಉದ್ಯಮ ಕ್ಷೇತ್ರದಲ್ಲಿ ವಿಶೇಷ ಪರಿಣಿತಿ ಪಡೆದಿದ್ದು, ಮೂರುವರೆ ದಶಕಗಳಿಂದ ಆಪರೇಷನ್ ಮ್ಯಾನೇಜ್ಮೆಂಟ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್, ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್ ಮತ್ತು ಆರೋಗ್ಯ, ಸುರಕ್ಷತೆ ಮತ್ತು ಪರಿಸರ ನಿರ್ವಹಣೆಯಲ್ಲಿ ಸಂಸ್ಥೆಯ ಮುಖ್ಯಸ್ಥರಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅಪಾರ ಅನುಭವ ಹೊಂದಿದ್ದಾರೆ.

ವರ್ಮ ಅವರು ಜೂನ್ 2020 ರಿಂದ ಎಂಆರ್‌ಪಿಲ್‌ ನಿರ್ದೇಶಕರಾಗಿ ರಿಫೈನರಿ ಮಂಡಳಿಯಲ್ಲಿದ್ದಾರೆ. ಅವರು ಎಂಎಸ್‌ಟಿಪಿಎಲ್‌, ಒಎನ್‌ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಮತ್ತು ಶೆಲ್- ಎಂಆರ್‌ಪಿಎಲ್‌ ಏವಿಯೇಷನ್‌ನ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ ಅಪಾರ ಅನುಭವ ಹೊಂದಿದ್ದಾರೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾದ ಸಂಜಯ್ ವರ್ಮಾ ಅವರು ಡಿಸೆಂಬರ್ 1993 ರಲ್ಲಿ ಎಂಆರ್‌ಪಿಎಲ್‌ ಸೇರಿದರು ಮತ್ತು ರಿಫೈನರಿ ಮತ್ತು ಅದರ ಆರೊಮ್ಯಾಟಿಕ್ ಕಾಂಪ್ಲೆಕ್ಸ್‌ನ ಎಲ್ಲಾ ಮೂರು ಪ್ರಮುಖ ಹಂತಗಳ ಕಾರ್ಯಗತಗೊಳಿಸುವಿಕೆ ಮತ್ತು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವನ್ನು ಅವರು ವಹಿಸಿದ್ದರು.

ಎಂಆರ್‌ಪಿಎಲ್‌ ಸಂಸ್ಥೆಯ ಕಾರ್ಯಕ್ಷಮತೆ, ಗೌರವ, ಹೆಚ್ಚಿಸುವಲ್ಲಿ ಅವರ ಪಾತ್ರ ಅಪಾರವಾಗಿದೆ. ಅವರ ಶ್ರಮದಿಂದಾಗಿ 2022-23 ನೇ ಸಾಲಿನಲ್ಲಿ ಎಂಆರ್‌ಪಿಎಲ್‌ ಸಂಸ್ಥೆ ರಾಷ್ಟ್ರದ ಏಕೈಕ ಸಾರ್ವಜನಿಕ ರಂಗದ ಅತ್ಯುತ್ತಮ ತೈಲೋತ್ಪನ್ನ ಸಂಸ್ಥೆಯಾಗಿ ಮೂಡಿಬರಲು ಸಾಧ್ಯವಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು