ಉಜಿರೆ: ಸಮಾಜದಲ್ಲಿ ನಿರ್ಲಕ್ಷಿತರಾದದುರ್ಬಲರಅಭಿವೃದ್ಧಿಗೆ ಪೂರಕವಾಗುವ ಅವಕಾಶಗಳನ್ನು ಒದಗಿಸಿಕೊಡುವ ಮಹತ್ವದ ಪ್ರಕ್ರಿಯೆಯಲ್ಲಿ ಸಮಾಜಕಾರ್ಯ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಪಿ ಹೇಳಿದರು.
ಎಸ್.ಡಿ.ಎಂಕಾಲೇಜಿನ ಸಮಾಜಕಾರ್ಯ ವಿಭಾಗವು ಶುಕ್ರವಾರ ‘ಸಂಭ್ರಮ’ ಶೀರ್ಷಿಕೆಯಲ್ಲಿ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕಾಲಮಾನದಲ್ಲಿ ಯೂಕೂಡ ಹಲವರು ಯುವಕರು ಯೋಚಿಸುವುದೇನೆಂದರೆ ಡಾಕ್ಟರ್, ಇಂಜಿನಿಯರ್ ಮತ್ತುಇತರೆ ಕೆಲಸಗಳಿಗೆ ಮಾತ್ರ ಸೀಮಿತರಾಗಿರುತ್ತಾರೆ. ಆದರೆ ಸಮಾಜಸೇವೆಯಲ್ಲಿ ತಮ್ಮನ್ನುತಾವು ಸಮರ್ಪಿಸಿಕೊಳ್ಳಲು ಯಾರೂ ಸಿದ್ಧರಿಲ್ಲ. ಇಂಥ ಮನಸ್ಥಿತಿಯ ಚೌಕಟ್ಟಿನಿಂದ ಹೊರಬರಬೇಕು. ಖಿನ್ನತೆಗೆ ಒಳಗಾಗಿರುವ ಎಷ್ಟೋ ಶೋಷಿತ ಸಮುದಾಯದವರನ್ನು ಮೇಲೆತ್ತುವಲ್ಲಿ ಸರ್ಕಾರೇತರ ಸಂಸ್ಥೆಗಳು ಮಹತ್ತರಕಾರ್ಯವನ್ನು ವಹಿಸಬೇಕು ಎಂದು ತಿಳಿಸಿದರು.
‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ನುಡಿಯಂತೆ ಕಾರ್ಯೋನ್ಮುಖರಾಗಬೇಕು. ಕೆಲಸ ಯಾವುದೇಆಗಿರಬಹುದು. ಆ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಈ ಮನೋಭಾವದೊಂದಿಗಿನ ವೃತ್ತಿಬದ್ಧತೆಯು ಸಮಾಜದ ನಿರ್ಲಕ್ಷಿತ ಸಮುದಾಯದ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದರು.
ಮುಖ್ಯಅತಿಥಿಯಾದ ಎಸ್.ಡಿ .ಎಂ ಶಿಕ್ಷಣ ಸಂಸ್ಥೆಯಕಾರ್ಯನಿರ್ವಾಹಕಅಧಿಕಾರಿ ಎಂ. ವೈ ಹರೀಶ್ ಮಾತನಾಡಿ ದೇಶದ ಬೆಳವಣಿಗೆಯಲ್ಲಿ ಯುವಕರ ಪಾತ್ರವನ್ನು ವಿಶ್ಲೇಷಿಸಿದರು. ಪ್ರಸ್ತುತ ದಿನಗಳಲ್ಲಿ ಯುವಕರು ಮಾದಕ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ಈ ಬಗೆಯ ದುಶ್ಚಟಗಳಿಂದ ದೂರವಿರಬೇಕು. ಯುವಕರುದೇಶದ ಶಕ್ತಿಯಾಗಿರಬೇಕು. ಸಮಾಜ ಸೇವೆಯಲ್ಲಿ ಯುವಕರು ತಮ್ಮನ ತಾವು ತೊಡಗಿಸಿಕೊಳ್ಳಬೇಕು ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಅಧ್ಯಕ್ಷರಾದ ಡಾ ಕೆ.ಜಿ. ಪರಶುರಾಮ ಮಾತನಾಡಿದದರು. ಎಸ್.ಡಿ.ಎಂ ಕಾಲೇಜಿನ ಗ್ರಂಥಾಲಯವು ವಿಶಿಷ್ಟವಾಗಿದೆ. ಇಲ್ಲಿಅಧ್ಯಯನಕ್ಕೆ ಪೂರಕವಾಗುವಂಥ ಎಲ್ಲಾ ರೀತಿಯ ಸಂಪನ್ಮೂಲಗಳು ಲಭ್ಯ ಇಂತಹ ಒಂದು ಗ್ರಂಥಾಲಯವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ವಿಶ್ವನಾಥ .ಪಿ ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ರವಿಶಂಕರ್ಕೆ.ಆರ್ ಮತ್ತು ವಿದ್ಯಾರ್ಥಿ ಪ್ರತಿನಿಧಿ ಸಂಪತ್ಕುಮಾರ್ ಉಪಸ್ಥಿತರಿದ್ದರು.
ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಧನೇಶ್ವರಿ ಸ್ವಾಗತಿಸಿದರು. ದ್ವೀತಿಯ ಸಮಾಜಕಾರ್ಯ ವಿಭಾಗದ ವಿಧ್ಯಾರ್ಥಿನಿ ಆಗ್ನೇಯ ನಿರೂಪಿಸಿ, ಸಹಾಯಕ ಪ್ರಾಧ್ಯಾಪಕ ಡಾ. ಅಥುಲ್ಎಸ್.ಸೆಮಿತಾ ವಂದಿಸಿದರು.