ಮಂಗಳೂರು: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರನ್ನ ಭೇಟಿಯಾದರು. ಬಂಟ್ವಾಳ ತಾಲೂಕಿನ ಬಸ್ತಿಪಡ್ಪುವಿನಲ್ಲಿರುವ ಜನಾರ್ದನ ಪೂಜಾರಿ ಮನೆಗೆ ಭೇಟಿ ನೀಡಿ ಪೂಜಾರಿ ಅವರಿಂದ ಆಶೀರ್ವಾದ ಪಡೆದರು. ಈ ವೇಳೆ ಯು.ಟಿ.ಖಾದರ್ ಅವರನ್ನು ಜನಾರ್ದನ ಪೂಜಾರಿ ಹಾಡಿ ಹೊಗಳಿದ್ದಾರೆ.
ಖಾದರ್ ಅವರಿಗೆ ಯಾರು ಸರಿಸಾಟಿ ಇಲ್ಲ. ತಂದೆಯನ್ನು ಮೀರಿಸಿದ ಮಗ ಎಂದು ಹೇಳಿದ್ದಾರೆ. ಬಳಿಕ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್ ಜನಾರ್ದನ ಪೂಜಾರಿಯವರಂತಹ ಹಿರಿಯರ ಸಲಹೆ ಸೂಚನೆಗಳನ್ನು ಪಾಲಿಸುತ್ತೇನೆ ಎಂದು ಹೇಳಿದ್ದಾರೆ. ಜಿಲ್ಲೆ, ಕ್ಷೇತ್ರದ ಮತದಾರರ ಗೌರವ ಉಳಿಸುತ್ತೇನೆ ಎಂದಿದ್ದಾರೆ. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇನೆ ಎಂದು ತಿಳಿಸಿದ್ದಾರೆ.