News Kannada
Saturday, September 23 2023
ಮಂಗಳೂರು

ಶರವು ದೇವಳದಲ್ಲಿ ಕಬ್ಬುಗಳಿಂದ ವಿಘ್ನನಿವಾರಕನಿಗೆ ವಿಶೇಷ ಅಲಂಕಾರ

Special decoration for the destroyer of obstacles with sugarcane in the Sharavu temple
Photo Credit : News Kannada

ಮಂಗಳೂರು: ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಚೌತಿ ಹಬ್ಬವನ್ನು ಸೆ.19ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಭಕ್ತರು ಅಧಿಕ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರದ್ಧಾ ಭಕ್ತಿಯಿಂದ ಮಹಾಗಣಪತಿಗೆ ಪೂಜೆ ಸಲ್ಲಿಸಿದರು.

ಬೆಳಗ್ಗೆ ಉಷಾಃ ಕಾಲ ಪೂಜೆ, ಮಹಾಗಣಪತಿ ದೇವರಿಗೆ ಕಲ್ಪೋಕ್ತ ಪೂಜೆ, ಮಹಾಗಣಪತಿ ಹೋಮ ಪೂರ್ಣಾಹುತಿ ಹಾಗೂ ಮಧ್ಯಾಹ್ನ ಐದು ಸಾವಿರ ತೆಂಗಿನ ಕಾಯಿಯ ವಿಶೇಷ ಪಲ್ಲಪೂಜೆ ಮತ್ತು ಬಳಿಕ ರಥೋತ್ಸವ ನಡೆಯಿತು.

ಮಹಾಗಣಪತಿ ದೇವರ ಎದುರು ಕಬ್ಬುಗಳಿಂದ ಕೋಟೆಯ ರೀತಿ ಕಟ್ಟಿ ಅದರ ಒಳಗೆ 5 ಸಾವಿರ ತೆಂಗಿನ ಕಾಯಿ ಭಾಗ ಮಾಡಿ ಹಾಕಿ ಬಳಿಕ ಗಣಪತಿ ದೇವರಿಗೆ ಇಷ್ಟವಾದ ಎಲ್ಲವುಗಳನ್ನೂ ಅದರ ಒಳಗೆ ಹಾಕಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ಭಕ್ತರು ಸೇವಾರೂಪದಲ್ಲಿ ನೀಡಿದ್ದ ತೆಂಗಿನ ಕಾಯಿಗಳನ್ನು ಬಳಸಿಕೊಂಡು ಈ ಪೂಜೆ ನಡೆಸಲಾಯಿತು. ಸಂಜೆ ಚೌತಿ ಮಹಾ ಗಣಪತಿ ಹೋಮದ ಪ್ರಸಾದ ವಿತರಣೆ ನಡೆಯಿತು, ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆದವು.

See also  ಮುಖ್ಯ ಹಣಕಾಸು ಖಾತೆ ಅಧಿಕಾರಿ, ಕಂಟ್ರೋಲರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು