ಮಂಗಳೂರು: ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಬಲ್ಮಠ, ಕೂಳೂರು ಮಂಗಳೂರು ಇಲ್ಲಿ, ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವಿತ್ತು ಗೌರವಿಸುವ ಸಮಾರಂಭವು ದೇರಳಕಟ್ಟೆ, ಯೆನೆಪೋಯ ವಿಶ್ವವಿದ್ಯಾಲಯದ ಆವರಣ, ಯೆಂಡ್ಯೂರೆನ್ಸ್ ವಲಯದಲ್ಲಿ ಅಕ್ಟೋಬರ್ 30, 2023 ರಂದು ಬೆಳಗ್ಗೆ ಘಂಟೆ 10 ರಿಂದ ನೆರವೇರಿತು.
ಶ್ರೀ ಅನುಪಮ್ ಅಗರವಾಲ್ ಐಪಿಎಸ್, ಡಿಐಜಿಪಿ ಮತ್ತು ಪೆÇಲೀಸ್ ಆಯುಕ್ತರು, ಮಂಗಳೂರು ನಗರ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು. ನಿರಂತರವಾದ ಪ್ರಯತ್ನದಲ್ಲಿ ಬದುಕಿನ ಯಶಸ್ಸಿದೆ. ಸರಿಯಾದ ಮಾರ್ಗದಲ್ಲಿ ಮೂಲ ಉದ್ದೇಶವನ್ನು ಸಾಧಿಸುವ ಸಿದ್ಧಾಂತ ಗುಣ ವಿದ್ಯಾರ್ಥಿ ದೆಸೆಯಿಂದಲೇ ಬೆಳೆಯಬೇಕು. ಸತತ ಕ್ರಿಯಾಶೀಲರಾಗಬೇಕು ಎಂದು ಹಿತನುಡಿಗಳನ್ನು ಆಡಿದರು.
ಗೌರವ ಅತಿಥಿಗಳಾಗಿ ಅದಿತಿ ಉಮೇಶ್ ನಿರ್ದೇಶಕರು, ಅಜೋಲಿಸ್ ಬಯೋಸೈನ್ಸ್, ಪ್ರೈ.ಲಿಮಿಟೆಡ್, ಸಂಧ್ಯಾ ಮೆಂಡೋನ್ಸಾ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಪ್ರಧಾನ ಸಂಪಾದಕರು, ರೈನ್ಟ್ರೀ ಮೀಡಿಯಾ ಇವರು ಆಗಮಿಸಿದ್ದು ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳೆಲ್ಲರಿಗೂ ಶುಭಾಶಯ ಕೋರಿದರು.
ಡಾ. ಬಿ.ಎಚ್. ಶ್ರೀಪತಿ ರಾವ್ ಸನ್ಮಾನ್ಯ ಪ್ರೊ. ವೈಸ್ ಚಾನ್ಸೆಲರ್, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ಡಾ. ಬಿ.ಟಿ. ನಂದೀಶ್ ಪರೀಕ್ಷಾ ನಿಯಂತ್ರಕರು, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ಇವರ ಗೌರವ ಉಪಸ್ಥಿತಿಯಲ್ಲಿ ಸಮಾರಂಭ ನೆರವೇರಿತು.
ಡಾ. ಅರುಣ್ ಎ ಭಾಗವತ್, ಪ್ರಾಂಶುಪಾಲರು ಮತ್ತು ಡೀನ್ ಫ್ಯಾಕಲ್ಟಿ ಆಫ್ ಸೈನ್ಸ್ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬಿ.ಸಿ.ಎ, ಬಿ.ಎಸ್ಸಿ, ಬಿ.ಬಿ.ಎ ವಿಭಾಗದ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ಡಾ. ಶರೀನಾ ಪಿ, ಉಪಪ್ರಾಂಶುಪಾಲರು ಮತ್ತು ಡೀನ್ ಫ್ಯಾಕಲ್ಟಿ, ವಾಣಿಜ್ಯ ಮತ್ತು ನಿರ್ವಹಣೆ, ಸ್ವಾಗತಿಸಿದರು. ಡಾ. ಜೀವನ್ರಾಜ್, ಉಪಪ್ರಾಂಶುಪಾಲರು, ವಂದನಾರ್ಪಣೆ ಮಾಡಿದರು. ನಾರಾಯಣ್ ಸುಕುಮಾರ್, ಉಪಪ್ರಾಂಶುಪಾಲರು ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕಿಯರಾದ ಚರಿತ್ರ ಹಾಗೂ ಸನ್ನಿಧಿ ಕಾರ್ಯಕ್ರಮ ನಿರೂಪಿಸಿದರು.