ಉಳ್ಳಾಲ: ಉಳ್ಳ್ಳಾಲದಲ್ಲಿ ಪರಿವರ್ತನೆ ಜನತೆ ಬಯಸಿದ್ದಾರೆ. ಕ್ರಿಯಾಶೀಲ ಅಭ್ಯರ್ಥಿಯಾಗಿ ದುಡಿದ ವ್ಯಕ್ತಿ ಸತೀಶ್ ಕುಂಪಲ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೂಲಕ ಕ್ಷೇತ್ರಕ್ಕೆ ಅನೇಕ ಜನಪರ ಯೋಜನೆಗಳನ್ನು ತರುವಲ್ಲಿ ಸಫಲರಾಗಿದ್ದಾರೆ. ಅಂತಹ ಉತ್ತಮ ಕೆಲಸ ಕಾರ್ಯ ನಡೆಸಲು ಬಿಜೆಪಿ ಅಭ್ಯರ್ಥಿಯನ್ನು ಚುನಾಯಿಸಬೇಕಿದೆ ಎಂದು ಕಾಪು ಶಾಸಕ ಲಾಲಾಜಿ ಮೆಂಡನ್ ಹೇಳಿದರು.
ಅವರು ಉಳ್ಳಾಲದ ಮೊಗವೀರಪಟ್ನ ಭಾಗದಲ್ಲಿ ಚುನಾವಣಾ ಪ್ರಚಾರ ಕಾರ್ಯದ ಹಿನ್ನೆಲೆಯಲ್ಲಿ ಮನೆ ಮನೆ ಭೇಟಿ ನೀಡಿ ನಂತರ ಸುದ್ಧಿಗಾರರ ಜೊತೆಗೆ ಮಾತನಾಡಿದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಆಡಳಿತ ನಡೆಸುವುದು ಖಚಿತ. ಹಿಂದೆಯೂ ಉಳ್ಳಾಲ ವಿಧಾನಸಭೆಗೆ ಚುನಾವಣೆ ಬಂದಾಗ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆವು. ಈ ಬಾರಿಯೂ ಸ್ನೇಹಿತರೇ ಕಣದಲ್ಲಿರುವುದರಿಂದ ಹಲವು ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಲಾಗಿದೆ. ಕಾಪು ಕ್ಷೇತ್ರದಲ್ಲಿ ಮೊದಲ ಬಾರಿಗೆ ಶಾಸಕನಾಗಿ ಸ್ಪರ್ಧಿಸಲು ಮುಂದಾಗಿದ್ದಾಗ ಕೇವಲ2,500 ಮಾತ್ರ ಬಿಜೆಪಿ ಮತಗಳಾಗಿತ್ತು. ಆದರೆ ಕಳೆದ ಬಾರಿ ಬಿಜೆಪಿ 75,893 ಮತ ಪಡೆದು 11,000 ಕ್ಕಿಂತ ಅಧಿಕ ಮತಗಳನ್ನು ಪಡೆದು ಗೆಲುವು ಪಡೆಯಲಾಗಿತ್ತು. ಕಾಪು ಕ್ಷೇತ್ರಕ್ಕೆ 3,000 ಕೋಟಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಈ ಭಾರಿಯೂ ಗುರ್ಮೆ ಸುರೇಶ್ ಶೆಟ್ಟಿಯವರು ಅತ್ಯಧಿಕ ಮತಗಳ ಅಂತರದಲ್ಲಿ ಜಯಗಳಿಸುವ ವಿಶ್ವಾಸವಿದೆ ಎಂದರು.
ಈ ಸಂದರ್ಭ ಮೀನುಗಾರರ ಪ್ರಕೋಷ್ಠದ ಜಿಲ್ಲಾನಿಕಟಪೂರ್ವ ಸಂಚಾಲಕ ಶೋಭೇಂದ್ರ ಸಸಿಹಿತ್ಲು, ಸಂಚಾಲಕ ಗಿರೀಶ್ ಕರ್ಕೇರ ತಣ್ಣೀರುಬಾವಿ, ಸಹಸಂಚಾಲಕ ಅನಿಲ್ ಕುಂದರ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರೇಮನಾಥ್ ಪುತ್ರನ್, ಕ್ಷೇತ್ರ ಉಪಾಧ್ಯಕ್ಷ ಯಶವಂತ್ ಅಮೀನ್ , ಮಾಜಿ ಕಾರ್ಪೋರೇಟರ್ ಸುರೇಂದ್ರ ಪಾಂಗಳ್ , ಬೂತ್ ಅಧ್ಯಕ್ಷ ಮಹೇಶ್ ವಿ.ಕೆ , ಸುಂದರ್ ಸಾಲ್ಯಾನ್, ರಮೇಶ್ ಡಿ ಕರ್ಕೇರ, ಲತೀಶ್ ಪುತ್ರನ್ , ತುಕಾರಾಂ ಆರ್ ಸಾಲ್ಯನ್ , ಗಣೇಶ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.