ಉಳ್ಳಾಲ: ಮತಗಳಲ್ಲಿ ಬಹುಸಂಖ್ಯಾತ ಅಲ್ಪಸಂಖ್ಯಾತ ಎಂಬುದು ಇಲ್ಲ.ಸಮಾಜದ ಏಳಿಗೆಗಾಗಿ ಜಾತ್ಯಾತೀತ ತತ್ವದ ಮತಗಳು ಹಾಗೂ ಸಮಾಜಕ್ಕೆ ಮಾರಕವಾಗಿರುವಂತಹ ಕೋಮುವಾದಿ ಮತಗಳು ಮಾತ್ರವಿರುವುದು. ರಾಜ್ಯದಲ್ಲಿ ಶೇ. ೮೦ ಜನಸಾಮಾನ್ಯರು ಜಾತ್ಯಾತೀತ ತತ್ವಕ್ಕೆ ಬೆಂಬಲಿಸುವವರಾಗಿದ್ದಾರೆ. ಅಂಬೇಡ್ಕರ್ ತತ್ವದ ಕಾಂಗ್ರೆಸ್ ಪಕ್ಷವನ್ನು ಮತದಾರ ಬೆಂಬಲಿಸಲಿದ್ದಾನೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ಅವರು 203 ,ಮಂಗಳೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 103 ಬೋಳಿಯಾರು ಜಾರದಗುಡ್ಡೆ ಶಾಲೆಯಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಜನರ ನೋವು, ಸಮಸ್ಯೆಗಳನ್ನು ಮತದಾರ ಮತಪತ್ರದ ಮೂಲಕ ವ್ಯಕ್ತಪಡಿಸಲಿದ್ದು, ಜನವಿರೋಧಿಗಳನ್ನು ಕೆಳಗಿಳಿಸುತ್ತಾರೆ. ಕ್ಷೇತ್ರದಲ್ಲಿಯೂ ಎಲ್ಲಾ ಧರ್ಮೀಯರು ಸೌಹಾರ್ದತಯುತವಾಗಿ ಮತದಾನದಲ್ಲಿ ಪಾಲ್ಗೊಂಡು ಒಗ್ಗಟ್ಟಿನಿಂದ ಈ ಬಾರಿ ಕಾಂಗ್ರೆಸ್ ಬರಬೇಕು ಅನ್ನುವ ಉದ್ದೇಶ ಇಟ್ಟುಕೊಂಡು ಮತ ಚಲಾಯಿಸಿದ್ದಾರೆ. ೧೫ ದಿನಗಳ ಕಾರ್ಯಕರ್ತರ ಶ್ರಮಕ್ಕೆ ಧನ್ಯವಾದ ಸಮರ್ಪಿಸಿದ ಅವರು ಶಾಂತಿ, ನೆಮ್ಮದಿ ಅಭಿವೃದ್ಧಿ ಯ ರಾಜ್ಯಕ್ಕೆ ಹೆಚ್ಚಿನ ಮತದಾರರು ಬೆಂಬಲಿಸಲಿದ್ದಾರೆಯೇ ಹೊರತು ಗಲಭೆ, ಅಶಾಂತಿ, ಅಭಿವೃದ್ಧಿಯಾಗದ ರಾಜ್ಯಕ್ಕೆ ಬೆಂಬಲ ವ್ಯಕ್ತಪಡಿಸುವುದಿಲ್ಲ ಅನ್ನುವ ಭರವಸೆಯಿದೆ ಎಂದರು.
ಪುತ್ರಿಗೆ ಪ್ರಥಮ ಮತದಾನ
ಮಾಜಿ ಸಚಿವ ಹಾಗೂ ಶಾಸಕ ಯು.ಟಿ ಖಾದರ್ ಅವರ ಏಕೈಕ ಪುತ್ರಿ ಹವ್ವಾ ನಸೀಮ ತಮ್ಮ ಮೊದಲ ಹಕ್ಕನ್ನು ಜಾರದಗುಡ್ಡೆ ಶಾಲೆಯಲ್ಲಿ ತಂದೆ, ತಾಯಿಯ ಜೊತೆಗೆ ಚಲಾಯಿಸಿದರು. ಪುತ್ರಿಯ ಪ್ರಥಮ ಹಕ್ಕು ಚಲಾಯಿಸಿದ ಕುರಿತು ತಂದೆ ಖಾದರ್ ಸಂತಸ ವ್ಯಕ್ತಪಡಿಸಿದ