News Karnataka Kannada
Saturday, April 20 2024
Cricket
ಮಂಗಳೂರು

ಉಳ್ಳಾಲ: ಜಾತ್ಯಾತೀತ- ಸಂವಿಧಾನ ಬೆಂಬಲಿಸುವವರಿಗೆ ಜನರ ಬೆಂಬಲ – ಯು.ಟಿ ಖಾದರ್

Ullal: People's support to those who support the Secular Constitution- U T Khader
Photo Credit : Facebook

ಉಳ್ಳಾಲ: ಮತಗಳಲ್ಲಿ ಬಹುಸಂಖ್ಯಾತ ಅಲ್ಪಸಂಖ್ಯಾತ ಎಂಬುದು ಇಲ್ಲ.ಸಮಾಜದ ಏಳಿಗೆಗಾಗಿ ಜಾತ್ಯಾತೀತ ತತ್ವದ ಮತಗಳು ಹಾಗೂ ಸಮಾಜಕ್ಕೆ ಮಾರಕವಾಗಿರುವಂತಹ ಕೋಮುವಾದಿ ಮತಗಳು ಮಾತ್ರವಿರುವುದು. ರಾಜ್ಯದಲ್ಲಿ ಶೇ. ೮೦ ಜನಸಾಮಾನ್ಯರು ಜಾತ್ಯಾತೀತ ತತ್ವಕ್ಕೆ ಬೆಂಬಲಿಸುವವರಾಗಿದ್ದಾರೆ. ಅಂಬೇಡ್ಕರ್ ತತ್ವದ ಕಾಂಗ್ರೆಸ್ ಪಕ್ಷವನ್ನು ಮತದಾರ ಬೆಂಬಲಿಸಲಿದ್ದಾನೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.

ಅವರು 203 ,ಮಂಗಳೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 103 ಬೋಳಿಯಾರು ಜಾರದಗುಡ್ಡೆ ಶಾಲೆಯಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಜನರ ನೋವು, ಸಮಸ್ಯೆಗಳನ್ನು ಮತದಾರ ಮತಪತ್ರದ ಮೂಲಕ ವ್ಯಕ್ತಪಡಿಸಲಿದ್ದು, ಜನವಿರೋಧಿಗಳನ್ನು ಕೆಳಗಿಳಿಸುತ್ತಾರೆ. ಕ್ಷೇತ್ರದಲ್ಲಿಯೂ ಎಲ್ಲಾ ಧರ್ಮೀಯರು ಸೌಹಾರ್ದತಯುತವಾಗಿ ಮತದಾನದಲ್ಲಿ ಪಾಲ್ಗೊಂಡು ಒಗ್ಗಟ್ಟಿನಿಂದ ಈ ಬಾರಿ ಕಾಂಗ್ರೆಸ್ ಬರಬೇಕು ಅನ್ನುವ ಉದ್ದೇಶ ಇಟ್ಟುಕೊಂಡು ಮತ ಚಲಾಯಿಸಿದ್ದಾರೆ‌. ೧೫ ದಿನಗಳ ಕಾರ್ಯಕರ್ತರ ಶ್ರಮಕ್ಕೆ ಧನ್ಯವಾದ ಸಮರ್ಪಿಸಿದ ಅವರು ಶಾಂತಿ, ನೆಮ್ಮದಿ ಅಭಿವೃದ್ಧಿ ಯ ರಾಜ್ಯಕ್ಕೆ ಹೆಚ್ಚಿನ ಮತದಾರರು ಬೆಂಬಲಿಸಲಿದ್ದಾರೆಯೇ ಹೊರತು ಗಲಭೆ, ಅಶಾಂತಿ, ಅಭಿವೃದ್ಧಿಯಾಗದ ರಾಜ್ಯಕ್ಕೆ ಬೆಂಬಲ ವ್ಯಕ್ತಪಡಿಸುವುದಿಲ್ಲ ಅನ್ನುವ ಭರವಸೆಯಿದೆ ಎಂದರು.

ಪುತ್ರಿಗೆ ಪ್ರಥಮ ಮತದಾನ
ಮಾಜಿ ಸಚಿವ ಹಾಗೂ ಶಾಸಕ ಯು.ಟಿ ಖಾದರ್ ಅವರ ಏಕೈಕ ಪುತ್ರಿ ಹವ್ವಾ ನಸೀಮ ತಮ್ಮ ಮೊದಲ ಹಕ್ಕನ್ನು ಜಾರದಗುಡ್ಡೆ ಶಾಲೆಯಲ್ಲಿ ತಂದೆ, ತಾಯಿಯ ಜೊತೆಗೆ ಚಲಾಯಿಸಿದರು. ಪುತ್ರಿಯ ಪ್ರಥಮ ಹಕ್ಕು ಚಲಾಯಿಸಿದ ಕುರಿತು ತಂದೆ ಖಾದರ್ ಸಂತಸ ವ್ಯಕ್ತಪಡಿಸಿದ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು