News Karnataka Kannada
Friday, April 19 2024
Cricket
ಮಂಗಳೂರು

ವಾಮಂಜೂರು: ಚಿಣ್ಣರ ಕ್ರಿಯಾಶೀಲತೆಗಾಗಿ ಚಿಣ್ಣರ ಮೇಳ

Vamanjoor: Chinnara Mela for The Creativity of Chinnaras
Photo Credit : News Kannada

ವಾಮಂಜೂರು: ಚಿಣ್ಣರ ಚಾವಡಿ ವಾಮಂಜೂರು ಇದರ ಮಕ್ಕಳ ರಜಾ ಕಲಿಕಾ ಶಿಬಿರ  ಜೈ ಶಂಕರ್ ಮಿತ್ರ ಮಂಡಳಿ ತಿರುವೈಲು ವಾಮಂಜೂರು ಇಲ್ಲಿ ನಡೆಯಿತು. ಜೈ ಶಂಕರ್ ಮಿತ್ಯ ಮಂಡಳಿಯ ಅಧ್ಯಕ್ಷರಾದ ದಿವಾಕರ್ ಆಚಾರ್ಯ ಇವರು ಉದ್ಘಾಟಿಸಿ ಮಾತನಾಡುತ್ತಾ “ಮಕ್ಕಳು ಭವಿಷ್ಯದ ಸಮಾಜವನ್ನು ಕಟ್ಟುವವರು ಇಂತಹ ಮಕ್ಕಳ ಪ್ರತಿಭೆಗೆ ಅವಕಾಶಗಳನ್ನು, ವೇದಿಕೆಗಳನ್ನು ಒದಗಿಸಿಕೊಡಬೇಕಾಗಿದೆ ಮತ್ತು ಅವರ ಪ್ರತಿಭೆಗಳನ್ನು ಗುರುತಿಸಬೇಕಾಗಿರುವುದು ಈ ಸಮಾಜದ ಕರ್ತವ್ಯ ಎಂದರು. ಈ ಸಮಾರಂಭದಲ್ಲಿ ಜೈ ಶಂಕರ್ ಮಿತ್ರ ಮಂಡಳಿಯ ಗೌರವಾಧ್ಯಕ್ಷರಾದ ಕೆ ಗಂಗಯ್ಯ ಅಮಿನ್ ಮಾತನಾಡುತ್ತಾ ಮಕ್ಕಳು ಇಂದಿನ ಮೊಬೈಲ್ ಯುಗದಲ್ಲಿ ಅಂಗಳದ ಆಟಗಳನ್ನು ಮರೆತಿದ್ದಾರೆ.

ಮಕ್ಕಳಲ್ಲಿ ಮೊಬೈಲ್ ಹಾವಳಿಯಿಂದ ಕ್ರಿಯಾಶೀಲತೆಯು ಕಡಿಮೆಯಾಗುತ್ತಿದೆ. ಹೆತ್ತವರು ಕೂಡ ಈ ಕುರಿತು ಗಮನಹರಿಸುತ್ತಿಲ್ಲ ಹಾಗಾಗಿ ಮಕ್ಕಳನ್ನು ಮತ್ತೆ ಅಂಗಳಕ್ಕೆ ಕರೆ ತರುವ ಪ್ರಯತ್ನವನ್ನು ಈ ಚಿಣ್ಣರ ಚಾವಡಿ ನಡೆಸಲಿ ಎಂದರು ಶಿಕ್ಷಕರಾದ ದೀಪಿಕಾ ಇವರು ವಿದ್ಯಾರ್ಥಿಗಳನ್ನು ಶುಭಕೋರಿ ಮಾತನಾಡಿದರು. ಶಿಬಿರದಲ್ಲಿ ಮಾಲತಿ, ಮನೋಜ್ ವಾಮಂಜೂರು, ಜೀವಿತ ದೇವಸಬೆಟ್ಟು, ಕಾರ್ತಿಶ್ ಸಂಕೇಶಬೆಟ್ಟು, ಶೇಖರ ಪರಾರಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು