ಸುರತ್ಕಲ್: ಇನಾಯತ್ ಅಲಿ ಅವರು ಪುನೀತ್ ರಾಜ್ ಕುಮಾರ್ ಅವರಂತಹ ನಿಷ್ಕಲ್ಮಶ ಹೃದಯವುಳ್ಳ ಸಮಾಜ ಸೇವಕ. ಯಾವತ್ತೂ ಬಡವರಿಗೆ ನೊಂದವರಿಗೆ ದಾನ ಮಾಡಿದ್ದನ್ನು ಹೇಳಿಕೊಂಡು ಓಡಾಡಿದವರಲ್ಲ. ಅವರು ಈ ಬಾರಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಗೆಲ್ಲುವುದು ನಿಶ್ಚಿತ. ಅವರು ಗೆದ್ದರೆ ಅವರ ಹೆಸರಿನಲ್ಲಿ ಯಕ್ಷಗಾನ ಸೇವೆಯಾಟ ಆಡಿಸುವುದಾಗಿ ಹರಕೆ ಹೊತ್ತಿದ್ದೇನೆ ಎಂದು ಹಿರಿಯ ಯಕ್ಷಗಾನ ಪ್ರಸಂಗಕರ್ತರಾದ ಬೋಂದೆಲ್ ಕೃಷ್ಣನಗರ ನಿವಾಸಿ ಶ್ರೀನಿವಾಸ್ ಸಾಲಿಯಾನ್ ಅವರು ಹೇಳಿದರು.
ಇನಾಯತ್ ಅಲಿ ಗೆದ್ದರೆ ಬಜ್ಪೆ ಅಂಬಿಕಾ ಅನ್ನಪೂರ್ಣೇಶ್ವರಿ ಮೇಳದಿಂದ ಕೃಷ್ಣನಗರದಲ್ಲಿ ಅದ್ಧೂರಿಯಾಗಿ ಯಕ್ಷಗಾನ ಸೇವೆ ನಡೆಸುತ್ತೇನೆ ಎಂದು ಹೇಳಿದ ಅವರು ಬಜ್ಪೆಯ ಅಂಬಿಕಾ ಅನ್ನಪೂರ್ಣೇಶ್ವರಿ ಅನುಗ್ರಹದಿಂದ ಇನಾಯತ್ ಭರ್ಜರಿ ಜಯ ಸಾಧಿಸುವ ವಿಶ್ವಾಸ ನನಗಿದೆ ಎಂದರು.