ಬೆಂಗಳೂರು: ಮತದಾರರ ಗಮನ ಸೆಳೆಯುವ ಸಲುವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಅಡುಗೆ ಅನಿಲ ಸಿಲಿಂಡರ್ಗೆ ಪೂಜೆ ನೆರವೇರಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮೈಸೂರಿನಲ್ಲಿ ಚಾಮುಂಡೇಶ್ವರೀ ದೇವಿ ದರ್ಶನ ಪಡೆದು ಬೆಂಗಳೂರಿಗೆ ವಾಪಸಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಅಡುಗೆ ಅನಿಲ ಸಿಲಿಂಡರ್ಗೆ ಪೂಜೆ ಸಲ್ಲಿಸಿದರು. ಅಡುಗೆ ಅನಿಲದ ಬೆಲೆ ಗಗನಕ್ಕೇರಿರುವುದರಿಂದ ಗೃಹಿಣಿಯರ ಗಮನ ಸೆಳೆಯಲು ಹಾಗೂ ಮತದಾನದಂದು ಸಿಲಿಂಡರ್ಗೆ ಪೂಜೆ ನೆರವೇರಿಸಿ ಮತ ಹಾಕಬೇಕೆಂದು ಹೇಳುತ್ತಿದ್ದ ಡಿಕೆಶಿ ಅವರೇ ಸ್ವತಃ ಪಕ್ಷದ ಕಚೇರಿಯಲ್ಲಿ ಸಿಲಿಂಡರ್ಗೆ ಕುಂಕುಮ, ಅರಿಶಿನವಿಟ್ಟು ಹೂವಿನ ಹಾರ ಹಾಕಿ ಊದುಬತ್ತಿ ಬೆಳಗಿ ಕರ್ಪೂರ ಹಚ್ಚಿ ನಮಸ್ಕರಿಸಿದರು.