ಕಾರ್ಕಳ: ಕರಾವಳಿಯಲ್ಲಿ ಶೀಘ್ರವೇ ಕೈಗಾರಿಕೆ ಹಬ್ ನಿರ್ಮಿಸಲಾಗುವುದು, ಮಂಗಳೂರಿನಲ್ಲಿ ರಪ್ತು ಮಾಡುವ ಗುಣಮಟ್ಟದ ಪೀಠೋಪಕರಣಗಳ ನಿರ್ಮಾಣಕ್ಕೆ ಫರ್ನಿಚರ್ ಕ್ಲಸ್ಟರಿಗೆ ಶೀಘ್ರವೇ ಆದೇಶ ನೀಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಕಾರ್ಕಳ ತಾಲೂಕಿನ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಕರಾವಳಿ ಜಿಲ್ಲೆಗಳ ಆಧುನಿಕ ಅಭಿವೃದ್ಧಿಗೆ ಗ್ರೀನ್ ಪವರ್ ಆಧರಿತ ಕೈಗಾರಿಕಾ ಹಬ್ ನಿರ್ಮಿಸಲಾಗುವುದು.
ಇನ್ನು ಕಾರ್ಕಳದಲ್ಲಿ ಶಿಲ್ಪಕಲೆ, ಮರದ ಕೆತ್ತನೆ ಕ್ಲಸ್ಟರಿಗೆ ಜಾಗ ನೀಡಿದರೆ ತೆರಿಗೆ ವಿನಾಯಿತಿ ಸಹಿತ ಅನುಮತಿ ನೀಡಲಾಗುವುದು. ಮಂಗಳೂರು ಕಾರವಾರ ಬಂದರು ವಿಸ್ತರಣೆ ಜೊತೆಗೆ ಎಂಟು ಹೊಸ ಬಂದರು ನಿರ್ಮಾಣ ಮಳೆಗಾಲದ ಬಳಿಕ ಆರಂಭಿಸಲು ಟೆಂಡರ್ ಕರೆಯಲಾಗಿದೆ ಎಂದು ಹೇಳಿದ್ದಾರೆ.