News Kannada
Saturday, September 30 2023
ಉಡುಪಿ

ದೇಶದ ಮೇಲೆ ಭಕ್ತಿ ಇರುವವರು ರೈಲಿಗೆ ಬೆಂಕಿ ಹಚ್ಚುವುದಿಲ್ಲ: ಶೋಭಾ ಕರಂದ್ಲಾಜೆ

Shobha karanlaje
Photo Credit :

ಉಡುಪಿ: ಸೈನ್ಯಕ್ಕೆ ಸೇರಲು ಇಚ್ಛಿಸುವವರು, ದೇಶದ ಮೇಲೆ ಭಕ್ತಿ ಇರುವವರು ಎಂದೂ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡುವುದಿಲ್ಲ ಮತ್ತು ರೈಲಿಗೆ ಬೆಂಕಿಯನ್ನು ಹಚ್ಚುವುದಿಲ್ಲ. ಅನಾವಶ್ಯಕವಾಗಿ ಗೊಂದಲ ನಿರ್ಮಿಸುವ ಮತ್ತು ವಿದೇಶಿ ಶಕ್ತಿಗಳೊಂದಿಗೆ ಸೇರಿಕೊಂಡು ದೇಶಕ್ಕೆ ನಷ್ಟ ಮಾಡುವ ವ್ಯವಸ್ಥಿತ ಷಡ್ಯಂತ್ರವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಕೇಂದ್ರ ಕೃಷಿ (ರಾಜ್ಯಖಾತೆ) ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ದೇಶದ ವಿವಿಧ ಭಾಗದಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ಆದಾಗ ಹಲವು ಪಕ್ಷಗಳ ನಾಯಕರು ಮೌನವಾಗಿದ್ದರು. ಇಂಥ ಘಟನೆಯನ್ನು ನಾವು ಪದೇಪದೆ ನೊಡುತ್ತಿದ್ದೇವೆ. ಶಾಲಾ ಶಿಕ್ಷಣದಿಂದಲೇ ಯುವ ಪೀಳಿಗೆಗೆ ದೇಶಭಕ್ತಿ ತುಂಬುವ ಕಾರ್ಯ ವಿದೇಶಗಳಲ್ಲಿ ಆಗುತ್ತಿದೆ.

ಭಾರತದ ಯುವಕರಿಗೆ ಅಗ್ನಿವೀರ್‌ ಯೋಜನೆ ಮೂಲಕ ನಾಲ್ಕು ವರ್ಷಗಳ ತರಬೇತಿ ಸಿಗಲಿದೆ. ಇದಾದ ಅನಂತರದಲ್ಲಿ ಆಯುವಕರು ಖಂಡಿತವಾಗಿಯೂ ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡುವ ಜತೆಗೆ ಉತ್ತಮ ಸಮಾಜವನ್ನು ನಿರ್ಮಿಸಲಿದ್ದಾರೆ. ಆದರೆ ಉತ್ತಮ ಸಮಾಜ ನಿರ್ಮಾಣ ವಿಪಕ್ಷಗಳಿಗೆ ಬೇಕಾಗಿಲ್ಲ. ಸಮಾಜ ಕೆಟ್ಟ ಹಾದಿಯಲ್ಲೇ ಸಾಗಬೇಕು ಮತ್ತು ಓಟ್‌ ಬ್ಯಾಂಕ್‌ ರಾಜಕಾರಣ ಮಾತ್ರ ಅವರಿಗೆ ಬೇಕಿರುವುದು.

ಕೇಂದ್ರ ಸರಕಾರವು ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲದ ಸದ್ಬಳಕೆ ಮೂಲಕ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಅಗ್ನಿವೀರ್‌ ಯೋಜನೆ ರೂಪಿಸಿದೆ. ಇಲ್ಲಿ ಯಾರು ಕೂಡ ಯಾರ ಮೇಲೂ ಒತ್ತಡ ಹೇರುವುದಿಲ್ಲ. ಸ್ವ ಇಚ್ಛೆಯಿಂದ ಕುಟುಂಬದವರ ಅನುಮತಿ ಪಡೆದೇ ಅಗ್ನಿವೀರರಾಗಲಿದ್ದಾರೆ. ಈ ಮೂಲಕ ದೇಶದಲ್ಲಿ ಯುವ ಪಡೆ ನಿರ್ಮಾಣವಾಗಲಿದೆ ಎಂದರು.

 

See also  ಮೈಸೂರು: ವಾರಾಂತ್ಯಕ್ಕೆ ತುಘಲಕ್‌ ನಾಟಕ ಪ್ರದರ್ಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು