News Kannada
Tuesday, December 12 2023
ಉಡುಪಿ

ಕುಂದಾಪುರ: ಸಚಿವ ಎಸ್ ಅಂಗಾರ ಗಂಗೊಳ್ಳಿ ಬಂದರಿಗೆ ಭೇಟಿ

Kundapur: Minister S Angara visits Gangolli port
Photo Credit : News Kannada

ಕುಂದಾಪುರ: ತಾಂತ್ರಿಕವಾಗಿ ಜೆಟ್ಟಿ ಕಾಮಗಾರಿ ಕೆಲಸ ಆಗಿದೆವೋ ಇಲ್ಲವೋ ಎನ್ನುವುದರ ಬಗ್ಗೆ ಉನ್ನತ ಮಟ್ಟದ ಸಂಸ್ಥೆಯಿಂದ ತನಿಖೆಯನ್ನು ಮಾಡಲಾಗುವುದು ಕಾಮಗಾರಿ ಕೆಲಸದಲ್ಲಿ ಅವ್ಯವಹಾರ ಆಗಿದ್ದಲ್ಲಿ ಸೂಕ್ತವಾದ ತನಿಖೆಯನ್ನು ನಡೆಸಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲಾಗುವುದು. ಸರಕಾರಿ ಕಾಮಗಾರಿ ಕೆಲಸವನ್ನು ಮಾಡುವ ಗುತ್ತಿಗೆದಾರ ಕಂಪೆನಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಕಾಮಗಾರಿಯ ಗುಣ ಮಟ್ಟದ ಬಗ್ಗೆ ಅವರು ಕೂಡ ಗಮನವನ್ನು ಹರಿಸಬೇಕು ಕೆಲಸಲದಲ್ಲಿ ನಿರ್ಲಕ್ಷ್ಯ ತೋರುವ ಗುತ್ತಿಗೆದಾರ ಕಂಪೆನಿಯನ್ನು ಬ್ಲಾಕ್ ಲಿಸ್ಟ್ಗೆ ಹಾಕಲಾಗುವುದು ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್ ಅಂಗಾರ ಹೇಳಿದರು.

ಕುಂದಾಪುರ ತಾಲೂಕಿನ ಗಂಗೊಳ್ಳಿ ಬಂದರಿನಲ್ಲಿ ಕುಸಿತಗೊಂಡಿದ್ದ ಜೆಟ್ಟಿ ಕಾಮಗಾರಿ ಸ್ಥಳಕ್ಕೆ ಗರುವಾರ ಭೇಟಿ ನೀಡಿ ಸ್ಥಳ ಪರೀಶಿಲನೆ ನಡೆಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಿಐಡಿಇಎಫ್ ಸಂಸ್ಥೆಯವರು ನೀಲಿ ನಕಾಶೆಯನ್ನು ತಯಾರಿಸಿ ಗಂಗೊಳ್ಳಿ ಬಂದರಿನಲ್ಲಿ ಕೆಲಸವನ್ನು ನಿರ್ವಹಿಸುವ ಕಂಪೆನಿಗೆ ಒದಗಿಸಿಕೊಟ್ಟಿದ್ದಾರೆ ಆವೊಂದು ಪ್ರಕ್ರಿಯೆಯಲ್ಲಿ ಗುತ್ತಿಗೆದಾರ ಕಂಪೆನಿ ಕೆಲಸವನ್ನು ನಿರ್ವಹಿಸಿದೆಯೊ ಇಲ್ಲವೊ ಎನ್ನುವದರ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುವುದು ಪ್ಲ್ಯಾನಿಂಗ್ ನಂತೆ ಸಂಸ್ಥೆ ಕೆಲಸವನ್ನು ನಿರ್ವಹಿಸಿದ್ದರೆ ಈ ರೀತಿ ಅನಾಹುತ ಯಾಕೆ ಆಗಿದೆ ಎನ್ನುವುದರ ಬಗ್ಗೆಯೂ ಮಾಹಿತಿಯನ್ನು ಪಡೆಯಲಾಗುವುದು ಸ್ಥಳೀಯ ಮಿನುಗಾರರ ಅಭಿಪ್ರಾಯ ಪಡೆದುಕೊಂಡು ಮತ್ತೆ ಗಂಗೊಳ್ಳಿ ಬಂದರಿನಲ್ಲಿ ಕೆಲಸವನ್ನು ಮುಂದುವರೆಸಲಾಗುತ್ತದೆ ಎಂದರು.

ಗಂಗೊಳ್ಳಿ ಬಂದರಿನಲ್ಲಿ ನಡೆದ ಜಟ್ಟಿ ಕುಸಿತದ ವಿಡಿಯೊ ಒಂದನ್ನು ಟ್ಚಿಟರ್‌ನಲ್ಲಿ ಹಂಚಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯ ನವರು 40% ಕಮಿಷನ್ ಸರಕಾರದ ಪರಮಾವಧಿ ಕೆಲಸ ವೆಂದು ಆರೋಪ ಮಾಡಿದ ಬಗ್ಗೆ ಪರ್ತಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಇದೊಂದು ಭಾಲಿಶವಾದ ಹೇಳಿಕೆ ಭ್ರಷ್ಟಚಾರ ಜನ್ಮತಾಳಿದ್ದೆ ಕಾಂಗ್ರೆಸ್‌ನಿಂದ ರಾಜಕೀಯವಾಗಿ ಯಾರು ಎನ್ನನ್ನು ಬೇಕಾದರು ಆರೋಪ ಮಾಡಬಹುದು ಎಂದು ಭ್ರಷ್ಟಾರದ ಆರೋಪವನ್ನು ತಳ್ಳಿ ಹಾಕಿದರು. ಗಂಗೊಳ್ಳಿ ಬಂದರಿನ ಕೆಲಸದಲ್ಲಿ ಭ್ರಷ್ಟಚಾರ ನಡೆದಿದ್ದರೆ ತನಿಖೆಯನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮರಾವ್, ಬಂದರು ಅಧಿಕಾರಿ ಉದಯ ಕುಮಾರ್, ಮೀನುಗಾರರ ಮುಖಂಡರುಗಳು ಮತ್ತಿತರರು ಉಪಸ್ಥಿತರಿದ್ದರು.

See also  ಕಾರವಾರ: ದಸರಾ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಿವೇದಿತಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು