News Kannada
Saturday, June 03 2023
ಉಡುಪಿ

ಕುಂದಾಪುರ: ಭಗವಂತನ ಅನುಗ್ರಹದಿಂದ ಜೀವನದಲ್ಲಿ ಯಶಸ್ಸು

Kundapura: Success in life by god's grace
Photo Credit : News Kannada

ಕುಂದಾಪುರ: ನಮ್ಮ ಪ್ರಯತ್ನ ಮತ್ತು ಭಗವಂತನ ಅನುಗ್ರಹದಿಂದ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಸದ್ಭಕ್ತರ ಪ್ರಯತ್ನದಿಂದ ಸುಂದರವಾದ ಶಿಲಾಮಯ ದೇಗುಲ ನಿರ್ಮಾಣವಾಗಿದೆ ಮಹಾಂಕಾಳಿ ರೂಪ ಭಯಂಕರವಾದರು ಭಕ್ತರಿಗೆ ಅವಳು ತಾಯಿ ಹೃದಯಿ ದುಷ್ಟರಿಗೆ ಸಿಂಹ ಸ್ವಪ್ನ ಹಿಂದೂ ಸಮಾಜ ಬಾಂಧವರು ಶಾಂತಿ ಪ್ರೀಯರು,ನಮಗೆ ಸಂವಿಧಾನ ಇದೆ ದೈವಿ ಭಕ್ತಿ ಇದೆ ನಿಜವಾದ ಭಕ್ತಿಯಿಂದ ಮಂದಿರ ನಿರ್ಮಾಣವಾಗಿದೆ ಗ್ರಾಮದ ಜನರಿಗೆ ತಾಯಿ ಒಳಿತನ್ನು ಮಾಡಲಿ ಎಂದು ಪೇಜಾವರ ಮಠ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜೀ ನುಡಿದರು.

ಗಂಗೊಳ್ಳಿ ಶ್ರೀ ಮಹಾಂಕಾಳಿ ಅಮ್ಮನವರ ನವೀಕೃತ ಶಿಲಾದೇಗುಲ ಲೋಕಾರ್ಪಣೆ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಶ್ರೀ ಮಹಾಂಕಾಳಿ ಅಮ್ಮನವರ ವಠಾರದಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಅವರು ಮಾತನಾಡಿದರು.

ಆದಿ ಅಂತ್ಯವಿಲ್ಲದ ಸಾಗರದಲ್ಲಿ ಕೆಲಸ ಮಾಡುವ ಖಾರ್ವಿ ಸಮಾಜ ಭಾಂದವರ ಬದುಕು ಹೋರಾಟದಿಂದ ಕೂಡಿದೆ ಸಂಕಲ್ಪ ಶ್ರದ್ಧೆ ಭಕ್ತಿ ಮತ್ತು ಪರಿಶ್ರಮದಿಂದ ಗಂಗೊಳ್ಳಿ ಶ್ರೀ ಮಹಾಂಕಾಳಿ ಅಮ್ಮನವರ ಶಿಲಾದೇಗುಲದ ನಿರ್ಮಾಣದ ಕಾರ್ಯ ಅಲ್ಪ ಅವಧಿಯಲ್ಲಿ ನಡೆದಿರಿವುದು ದೇವಾನುಗ್ರಹದ ಕೃಪೆಯಿಂದ ಅಯೋಧ್ಯೆಯಲ್ಲಿ ಮೆಳೈಸಿದ ಇತಿಹಾಸ ಗಂಗೊಳ್ಳಿಯಲ್ಲಿ ಮರುಕಳಿಸಿದೆ ಎಂದರು.

ಪೇಜಾವರ ಮಠ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜೀ ಅವರನ್ನು ಗಂಗೊಳ್ಳಿ ರಾಮ ಮಂದಿರದಿಂದ ಮಹಾಂಕಾಳಿ ಅಮ್ಮನವರ ಸನ್ನಿಧಾನದ ವರಗೆ ಭವ್ಯ ಮೆರವಣಿಗೆ ಮೂಲಕ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

See also  ಉತ್ತರಪ್ರದೇಶ: ಬಟ್ಟೆ ವ್ಯಾಪಾರಿಯ ಕೊಲೆ ಪ್ರಕರಣ- ಆರೋಪಿಗಳು ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು