News Kannada
Thursday, June 01 2023
ಉಡುಪಿ

ಕಾರ್ಕಳ: ಉತ್ಸವಗಳ ಮೂಲಕ ಅರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ – ವಿ ಸುನೀಲ್ ಕುಮಾರ್

It has helped to increase economic activities through festivals - V Suneel Kumar
Photo Credit : News Kannada

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ನ ಸಮಾರೊರೋಪ ಹಾಗುಉಡುಪಿ ಜಿಲ್ಲಾ ರಜತಮಹೋತ್ಸವದ ಸಮಾರೋಪ ಏಕಕಾಲದಲ್ಲಿಯೆ ನಡೆಯುತ್ತಿರುವುದು ಖುಷಿಯ ವಿಚಾರವಾಗಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ಹೇಳಿದರು.

ಅವರು ಪರಶುರಾಮ ಥೀಂ ಪಾರ್ಕ್ ನ ಸಮಾರೋಪ ಸಮಾರಂಭ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು., ಉತ್ಸವಗಳ ಮೂಲಕ ಅರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಸಹಕಾರಿ ಯಾಗಿದೆ. ರಾಜ್ಯ ದಲ್ಲಿ ಕಾರ್ಕಳವೇ ಬ್ರಾಂಡ್ ನಿರ್ಮಾಣ ವಾಗಬೇಕು . ಕಾರ್ಕಳ ಉತ್ಸಾಹ ಮೂಲಕ ರಾಜ್ಯದಲ್ಲೆಲ್ಲ ಉತ್ಸಾಹ ವಾಗುವಂತೆ ಮಾಡಿದೆ ಎಂದರು.

ಕ್ಷೇತ್ರದ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸಗಳನ್ನು ನಡೆಯುತ್ತಿದೆ. ವಾರಾಹಿ ಯೋಜನೆ ಮೂಲಕ 46000 ಮನೆಗಳಿಗೆ ಕುಡಿಯುವ ನೀರು ತರುವ ಯೋಜನೆ ಮುಂದಿನ‌ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಕಾರ್ಕಳ ಸಾಂಸ್ಕೃತಿಕ ,ಧಾರ್ಮಿಕವಾಗಿ ,‌ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದೆ . ಕಾರ್ಕಳ ತಾಲೂಕಿನ ಮಹಿಳ ಕಾರ್ಮಿಕರಿಗೆ ಅನುಕೂಲ ವಾಗುವಂತೆ ಜವಳಿ ಪಾರ್ಕ್ ನಿರ್ಮಾಣವಾಗುತ್ತಿದೆ. ಯಾವುದೇ ಟೀಕೆ ಗಳಿಗೆ ಒಳಪಡದೆ ರಾಜಕೀಯ ಮಾಡದೆ ಪ್ರವಾಸೋದ್ಯಮ ಕ್ಕೆ ಪ್ರೋತ್ಸಾಹ ನೀಡುತಿದ್ದೇವೆ ಎಂದರು.

ಎಂ ಎಲ್ ಸಿ ಮಂಜುನಾಥ್ ಭಂಢಾರಿ ಪರಶುರಾಮ ರಾಮನ ಸೃಷ್ಟಿ ಯೊಳಗೆ ಪರಶುರಾಮನ ಮೂರ್ತಿಯನ್ನು ಸೃಷ್ಟಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ ಸುನೀಲ್ ಕುಮಾರ್ ಅವರನ್ನು ಅಧುನಿಕ ಪರಶುರಾಮ ಬಣ್ಣಿಸಿದರು. ಮುಂದಿನ ಚುನಾವಣೆಯಲ್ಲಿ ಸಚಿವ ಸುನೀಲ್ ಕುಮಾರ್ ಅವರನ್ನು ಗೆಲ್ಲಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಗೆಸೆಟಿಯರ್ ಸಂಪಾದಕಿ ಎ ರಾಜಮ್ಮ ಚೌಡರೆಡ್ಡಿ ಗೆಸೆಟಿಯರ್ ಮಾಹಿತಿ ನೀಡಿದರು. ಉಡುಪಿ ಜಿಲ್ಲಾ ಧಿಕಾರಿ ಕೂರ್ಮಾರಾವ್, ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿದರು.

ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಜಿಲ್ಲಾ ಎಸ್ಪಿ ಅಕ್ಷಯ್ ಮಚೀಂದ್ರಾ , ಉದ್ಯಮಿಗಳಾದ ಎಸ್ ಹುರ್ಲಾಡಿ ರಘುವೀರಶೆಟ್ಟಿ, , ಸುಧೀರ್ ಹೆಗ್ಡೆ ಬೈಲೂರು , ತೆಳ್ಳಾರು ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು .

ಇದೆ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಸುಪ್ರಿತ್ ರಾವ್ , ದೀಕ್ಷಿತ್, ಸಚಿನ್ ಕುಮಾರ್, ಗೌತಮ್, ಖ್ಯಾತ ವಿನ್ಯಾಸಕಾರ ಪುರುಷೋತ್ತಮ ಅಡ್ವೆ ,  ದೇವಾನಂದ , ಅನಿಲ್ , ಸದಾಶಿವ ಆಚಾರ್ , ಮೂರ್ತಿ ನಿಮಾರ್ತೃ ಕೃಷ್ಣ ನಾಯ್ಕ್ ತಂಡ ‌ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ರಮ್ಯ ಸುಧೀಂದ್ರ ಪ್ರಾರ್ಥಿಸಿದರು, ನವೀನ್ ನಾಯಕ್ ಸ್ವಾಗತಿಸಿದರು ಸದಾನಂದ ಸಾಲಿಯಾನ್ ದನ್ಯವಾದ ವಿತ್ತರು.

See also  ಕಾರವಾರ: ಸಮುದ್ರದಲ್ಲಿ ಬೆಳಕು ಮೀನುಗಾರಿಕೆ- ಸ್ಥಳೀಯ ಮೀನುಗಾರರಿಂದ ಆಕ್ಷೇಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು