News Kannada
Friday, March 24 2023

ಉಡುಪಿ

ಉಡುಪಿ: ಸ್ವಾವಲಂಬಿ ಭಾರತದ ಕನಸನ್ನು ಈ ಬಾರಿಯ ಬಜೆಟ್ ಭಗ್ನಗೊಳಿಸಿದೆ

This huge budget has shattered the dream of a self-reliant India
Photo Credit : News Kannada

ಉಡುಪಿ: ಮಾಜಿ ಪ್ರಧಾನಿ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಸರಕಾರದ ಸ್ವಾವಲಂಬೀ ಭಾರತದ ಕನಸನ್ನು ಈ ಭಾರಿಯ ಬಜೆಟ್ ಭಗ್ನಗೊಳಿಸಿದೆ. ಬಹು:ಶ ಕೂಪ ಮಂಡೂಕ ಮನಸ್ಥಿತಿಯ ಬಿಜೆಪಿಯ ಕೆಲವೊಂದು ನಾಯಕರಿಗೆ ಇದು ಅರ್ಥ ಆಗಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ ಚಂದ್ರಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ದೇಶದ ಸಮೃದ್ದ ಆರ್ಥಿಕತೆ ಮತ್ತು ಅದರ ಸ್ಥಿರತೆ ಗ್ರಾಮೀಣ ಭಾರತದ ಅಭಿವೃದ್ಧಿಯನ್ನು ಅವಲಂಬಿತವಾಗಿದೆ. ಆದರೆ ಪ್ರಧಾನಿ ಮೋದಿ ಸರಕಾರ ಮಂಡಿಸಿರುವ ಬಜೆಟ್ ಗ್ರಾಮೀಣ ಪ್ರದೇಶದ ಅಭಿವೃದ್ಧಿಯನ್ನು ಸಂಪೂರ್ಣ ಅವಗಣಿಸಿದೆ. ಕಿರು ಕೈಗಾರಿಕೆ, ಕೃಷಿ ರಸಗೊಬ್ಬರ ಸಬ್ಸಿಡಿ, ಉಧ್ಯೋಗ ಖಾತರಿ ಯೋಜನೆ, ಆಹಾರ ಸಬ್ಸಿಡಿ ಹಾಗೂ ಇತರೆ ಗ್ರಾಮಾಭಿವೃದ್ಧಿ ಯೋಜನೆಗಳೂ ಸೇರಿ ಈ ಕ್ಷೇತ್ರಕ್ಕೆ ಕಳೆದ ಆರ್ಥಿಕ ವರ್ಷದ ಬಜೆಟ್ಟಿನಲ್ಲಿ ನೀಡಿದ್ದ ಅನುಧಾನದ 27ಶೇಕಡಾ ಅಂದರೆ ಸುಮಾರು 3.12 ಲಕ್ಷ ಕೋಟಿ ರೂ. ಅನುಧಾನವನ್ನ ಕಡಿತಗೊಳಿಸಲಾಗಿದೆ. ಇದೊಂದು ರೈತ ವಿರೋದಿ, ಬಡವರ ವಿರೋಧಿ, ಗ್ರಾಮೀಣ ಅಭಿವೃದ್ದಿ ವಿರೋಧಿ ಸರಕಾರ ಎಂದು ಆವರು ಹೇಳಿದ್ದಾರೆ.

ವಿಶ್ವ ಆರ್ಥಿಕ ಹಿಂಜರಿತದ ಸಂದಿಗ್ಧ ಸ್ಥಿತಿಯಲ್ಲಿ ಆರ್ಥಿಕ ಸ್ಥಿರತೆಯಲ್ಲಿ ವಿಶ್ವಕ್ಕೆ ಆಶಾಕಿರಣವಾಗಿ, ವಿಶ್ವ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಭಾರತ ಇಂದು ಸಾಲದ ಸುಳಿಯಲ್ಲಿ ಸಿಲುಕಿ ಇಂದು 190ರ ಆದುಪಾಸಿಗೆ ಜಾರಿಬಿದ್ದಿರುವ ಯತಾರ್ಥ ಸತ್ಯ ಮತ್ತು ಆ ಸಂಕಷ್ಟ ಈ ದೇಶದ ನಿರುದ್ಯೋಗಿ ಯುವಕರಿಗೆ, ನಷ್ಟದಲ್ಲಿ ಮುಳುಗಿರುವ ಕಿರು ಕೈಗಾರಿಕೋಧ್ಯಮಿ ಗಳಿಗೆ ಮತ್ತು ಕೃಷಿಕರಿಗೆ ಮಾತ್ರ ಅರ್ಥ ಆಗಲು ಸಾಧ್ಯ ಎಂದು ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಕಟಣೆಗಾಗಿ

See also  ಕುಂದಾಪುರ: ಶ್ರೀ ಕ್ಷೇತ್ರ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು