News Kannada
Saturday, March 25 2023

ಉಡುಪಿ

ಕಾರ್ಕಳ: ಗ್ರಾಹಕರಿಗೆ ವಂಚನೆ ಜ್ಯವೆಲ್ಲಸ್೯ ಮಾಲಕನಿಗೆ ಶಿಕ್ಷೆ

Photo Credit : News Kannada

ಕಾರ್ಕಳ: ನಗರದ ಮಾರ್ಕೆಟ್ ರಸ್ತೆಯಲ್ಲಿ ಶ್ರೀದುರ್ಗ ಜುವೆಲ್ಲರ್ಸ್ ವ್ಯವಹಾರ ನಡೆಸುತ್ತಾ ಗ್ರಾಹಕರಿಗೆ ವಂಚನೆಗೈದ ಆರೋಪಿ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಎಂಬಾತನಿಗೆ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಅವರು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ಲೀಲಾವತಿ ಪೂಜಾರ್ತಿ ಇವರಿಂದ ೨೦೧೦ ನವಂಬರ್ ೦೪ರಂದು ೨೭.೫೦೦ ಗ್ರಾಂ ತೂಕದ ರೂ. ೫೫,೦೦೦ ಮೌಲ್ಯದ ಹಳೆಯ ಚಿನ್ನದ ಕರಿಮಣಿ ಸರವನ್ನು ಪಡೆದುಕೊಂಡು ಇದರಿಂದ ಹೊಸ ತಾಗಿ ಚಿನ್ನದ ಎರಡಿ ಎಳೆ ನೇಯ್ಗಿ ಪೀಸ್ ಗುಂಡು ಕರಿಮಣಿ ಸರವನ್ನು ಮಾಡಿಕೊಡುವುದಾಗಿ ಆರೋಪಿ ನಂಬಿಸಿದನು.

ಮೇರಿ ಡಿ’ಸೋಜಾ ಇವರಿಂದ ೨೦೧೦ ನವಂಬರ್ ೨೦ರಂದು ೧೧ ಗ್ರಾಂ ತೂಕದ ರೂ. ೨೨,೦೦೦ ರೂಪಾಯಿ ಮೌಲ್ಯದ ಹಳೆ ಒಂದು ಜೊತೆ ಚಿನ್ನದ ಜೆಡೆ ಮುತ್ತು ಬೆಂಡೋಲೆ ಚಿನ್ನದ ಆಭರಣವನ್ನು ಪಡೆದುಕೊಂಡು ಇದರಿಂದ ಹೊಸತಾಗಿ ಒಂದು ಜೊತೆ ಚಿನ್ನದ ಜೆಡೆ ಮುತ್ತು ಬೆಂಡೋಲೆ ಮತ್ತು ಚಿನ್ನದ ಉಂಗುರವನ್ನು ಮಾಡಿಕೊಡುವುದಾಗಿ ಇವರಲ್ಲೂ ಆರೋಪಿ ನಂಬಿಸಿದನು.
ಮೀನಾಕ್ಷಿ ಇವರಿಂದ ೨೦೧೧ ಫೆಬ್ರವರಿ ೦೫ರಂದು ೧೫.೭೫೦ ಗ್ರಾಂ ತೂಕದ ರೂ. ೩೧,೫೦೦ ಮೌಲ್ಯದ ಹಳೆಯ ಡಿಸ್ಕೋ ಚೈನನ್ನು ಪಡೆದುಕೊಂಡು ಅದರಿಂದ ಹೊಸ ಹೊಸ ಹವಳದ ಲಕ್ಷ್ಮೀ ಪೆಂಡೆಂಟ್ ಇರುವ ಕನಕ ಮಾಲೆಯನ್ನು ಮಾಡಿಕೊಡುವುದಾಗಿ ನಂಬಿಸಿದ ಆರೋಪಿಯೂ ಹಳೆ ಚಿನ್ನದ ಒಡವೆಗಳನ್ನು ಪಡೆದಿದ್ದನು.

ಗ್ರಾಹಕರಿಗೆ ಚಿನ್ನದ ಒಡವೆಗಳನ್ನು ಹಿಂದಿರುಗಿಸದೇ ಅವುಗಳನ್ನು ಆಪಾದಿತನು ಕರಗಿಸಿ ಬೇರೆಯವರಿಗೆ ಮಾರಾಟ ಮಾಡಿ ಪಡೆದ ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಒಟ್ಟು ರೂ. ೧,೦೮,೫೦೦ ವಂಚಿಸಿ ನಂಬಿಕೆ ದ್ರೋಹವೆಸಗಿರುತ್ತಾನೆ.

ಈ ಬಗ್ಗೆ ಆರೋಪಿಯ ವಿರುದ್ದ ಭಾ.ದಂ.ಸA. ಕಲಂ.೪೦೯,೪೨೦ರ ರೀತ್ಯಾ ಶಿಕ್ಷಿಸಲ್ಪಡುವ ಅಪರಾಧಗಳಿಗೆ ಸಂಬಂಧಿಸಿ ಕಾರ್ಕಳ ನಗರ ಠಾಣೆಯ ಪೋಲೀಸ್ ಮುಖ್ಯ ಪೇದೆಯಾಗಿದ್ದ ಯಶವಂತ ಎಂ..ವಿ. ಪ್ರಥಮ ವರ್ತಮಾನ ತಯಾರಿಸಿ, ಪೊಲೀಸ್ ಉಪನಿರಕ್ಷಕರಾದಪ್ರಮೋದ್ ಕುಮಾರ್ ಪಿ. ಕಬ್ಬಾಳ್ ರಾಜ್ ಹೆಚ್.ಡಿ ಇವರು ಪ್ರಕರಣದ ತನಿಖೆ ನಡೆಸಿದ್ದರು.ಪೊಲೀಸ್ ಉಪನಿರೀಕ್ಷಕ ಇಮ್ರಾನ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಆರೋಪಿಯ ವಿರುದ್ಧ ದಾಖಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಕೈಗೊಂಡ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಇವರು ಆರೋಪಿಯ ವಿರುದ್ಧದ ಪ್ರಕರಣವು ಸಾಭೀತು ಆಗಿದೆ ಎಂದು ಅಭಿಪ್ರಾಯಪಟ್ಟರು.

ಆರೋಪಿ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಇವನನ್ನು ಅಪರಾಧಿ ಎಂದು ಘೋಷಿಸಿ ಕಲಂ.೪೦೯ ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ ೩ವರ್ಷಗಳ  ಸಾದಾ ಸಜೆ ಮತ್ತು ರೂ.೫,೦೦೦ ದಂಡ, ದಂಡ ತೆರಲು ತಪ್ಪಿದ್ದಲ್ಲಿ ೧ ತಿಂಗಳ ಸಾದಾ ಸಜೆ. ಕಲಂ.೪೨೦ ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ ಸಾದಾ ಸಜೆ ಮತ್ತು ರೂ.೫,೦೦೦ ದಂಡ, ದಂಡ ತೆರಲು ತಪ್ಪಿದ್ದಲ್ಲಿ ೧ ತಿಂಗಳ ಸಾದಾ ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

See also  ಕಾರ್ಕಳ: ಹೆಸರಾಂತ ಕೃಷಿಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಪ್ರಕರಣದಲ್ಲಿ ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಶೋಭಾ ಮಹಾದೇವ ನಾಯ್ಕ ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿ, ವಾದ ಮಂಡಿಸಿರುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು