News Kannada
Sunday, March 26 2023

ಉಡುಪಿ

ಕುಂದಾಪುರ: ಸೂರಿಲ್ಲದ ಮಹಾಲಿಂಗೇಶ್ವರನಿಗೆ ಬಯಲಿನಲ್ಲೆ ಪೂಜೆ,ಅನಾಥವಾದ ಶಿವಾಲಯ

Kundapur: Lord Mahalingeshwara worshipped in the open, an orphaned Shiva temple
Photo Credit : News Kannada

ಕುಂದಾಪುರ:ಬೈಂದೂರು ತಾಲೂಕಿನ ಹೇರೂರು ಗ್ರಾಮದ ರಾಗಿ ಹಕ್ಲು ಕೊಣಾಲು ಪರಿಸರದಲ್ಲಿ ಸೌಪರ್ಣಿಕಾ ನದಿ ತೀರದಲ್ಲಿ ಸೂರಿಲ್ಲದೆ ಬಯಲಿನಲ್ಲಿ ನೆಲೆಯಾಗಿರುವ ಪುರಾಣ ಪ್ರಸಿದ್ಧ ಶ್ರೀಮಹಾಲಿಂಗೇಶ್ವರ ದೇವರಿಗೆ ಮಹಾಶಿವರಾತ್ರಿ ಮಹೋತ್ಸವದ ದಿನದಂದು ಸಾಂಪ್ರದಾಯಕವಾಗಿ ಶಿವ ಪೂಜೆಯನ್ನು ನೆರವೇರಿಸಲಾಯಿತು.

ನೂರಾರು ವರ್ಷಗಳ ಕಾಲ ಇತಿಹಾಸವಿರುವ ಅರಸರ ಕಾಲದಲ್ಲಿ ವೈಭಯುತವಾಗಿ ವಿಜೃಂಭಿಸಿದ ಧರ್ಮ ರಕ್ಷಕನಾದ ಶ್ರೀಮಹಾಲಿಂಗೇಶ್ವರನ ದೇವಾಲಯವು ಅಜೀರ್ಣಾವಸ್ಥೆಯಲ್ಲಿದ್ದು ಸೂರಿಲ್ಲದ ಶಿವ ಮಳೆ ಬಿಸಿಲಿಗೆ ಮೈ ಒಡ್ಡಿ ಭಕ್ತರನ್ನು ಹರಸುತ್ತಾ ಇದ್ದಾನೆ.

ಶಿವಾಲಯದ ನಿರ್ಮಾಣಕ್ಕೆ ಬೇಕಿದೆ ಸಂಕಲ್ಪ : ನೂರಾರು ವರ್ಷಗಳಿಂದ ರಾಗಿ ಹಕ್ಲು ಕೊಣಾಲು ಪರಿಸರದಲ್ಲಿ ನೆಲೆಯಾಗಿರುವ ಶ್ರೀಮಹಾಲಿಂಗೇಶ್ವರ ದೇವಾಲಯವು ಕುಸಿದು ಬಿದ್ದು ನೆಲಸಮನಾಗಿ ಸರಿ ಸುಮಾರು 50 ಕ್ಕೂ ಅಧಿಕ ವರ್ಷಗಳೆ ಕಳೆದು ಹೋಗಿದೆ ಹೂವಿನ ಎಸಳನ್ನು ತಲೆ ಮೇಲಿಡದೆ ಹೆಚ್ಚು ಕಮ್ಮಿ ಐದು ದಶಕಗಳು ಸಂದಿವೆ ನೈವೇದ್ಯ, ಪೂಜೆ ಪೂರಸ್ಕಾರವಿಲ್ಲದೆ ಶಿವನು ಬಟಾಬಯಲಿನಲ್ಲಿ ಅನಾಥನಾಗಿ ಸೂರ್ಯ ಕಿರಣಗಳಿಗೆ ಮೈ ಒಡ್ಡಿ ನಿಂತಿದ್ದಾನೆ.

ಧರ್ಮ ರಕ್ಷಕನಾದ ಮಹಾದೇವನಿಗೆ ಸೂರೊಂದನ್ನು ನಿರ್ಮಿಸುವ ಕಾರ್ಯಕ್ಕೆ ಸದ್ಭಕ್ತರು, ಊರವರು, ಪರ ಊರಿನವರು,ದಾನಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸ್ವಯಂ ಪ್ರೇರಿತರಾಗಿ ಶ್ರೀಮಹಾಲಿಂಗೇಶ್ವರ ದೇವರ ಸಾನಿಧ್ಯವನ್ನು ಸಂದರ್ಶನ ಮಾಡಿ ದೇವಾಲಯದ ನಿರ್ಮಾಣದ ಕಾರ್ಯಕ್ಕೆ ಎಲ್ಲರೂ ಸಂಕಲ್ಪ ಮಾಡುವುದರ ಮುಖಾಂತರ ಗತ ವೈಭವ ಮರುಕಳಿಸುವ ಕೆಲಸ ಮಾಡಬೇಕಾಗಿದೆ.

See also  ಕಾರ್ಕಳ: ಒಡಹುಟ್ಟಿದ ಅಣ್ಣನನ್ನೇ ಚೂರಿಯಿಂದ ಇರಿದು ಕೊಂದ ತಮ್ಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು