News Kannada
Monday, March 20 2023

ಉಡುಪಿ

ಮಣಿಪಾಲ: 32 ಅಂತಸ್ತಿನ ಕಟ್ಟಡ ಏರಿ ಸಾಹಸ ಮೆರೆದ ಜ್ಯೋತಿರಾಜ್

Karkala: Jyothiraj to climb Samriddhi Hills building tomorrow
Photo Credit : News Kannada

ಮಣಿಪಾಲ: ಕೋತಿರಾಜ್ ಖ್ಯಾತಿಯ ಜ್ಯೋತಿರಾಜ್ ಉಡುಪಿ‌ ಜಿಲ್ಲೆಯ ಅತೀ ಎತ್ತರದ ಕಟ್ಟಡ ಮಣಿಪಾಲದಲ್ಲಿರುವ 32ಅಂತಸ್ತಿನ ರಾಯಲ್ ಎಂಬಸ್ಸಿ ಅನ್ನು ಬರಿಗೈಯಲ್ಲಿ ಯಶಸ್ವಿಯಾಗಿ ಹತ್ತುವ ಮೂಲಕ ಸಾಹಸ ಮೆರೆದಿದ್ದಾರೆ. ಆ ಮೂಲಕ ಜೀವಮಾನದಲ್ಲೇ ಅತ್ಯಂತ ಎತ್ತರದ ಕಟ್ಟಡವನ್ನು ಏರಿದರು.

ಸುಮಾರು 350 ಅಡಿ ಎತ್ತರದ ಈ ಕಟ್ಟಡವನ್ನು ಹತ್ತಿ ಕನ್ನಡದ ಬಾವುಟ ಹಾರಿಸಿದರು. ಕಟ್ಟಡದ ಕೆಳಗೆ ನೆರೆದಿದ್ದ ನೂರಾರು ಸಂಖ್ಯೆಯ ಮಂದಿ ಚಪ್ಪಾಳೆ, ಶಿಳ್ಯೆ ಹಾಕುವ ಮೂಲಕ ಕೋತಿರಾಜ್ ಅವರಿಗೆ ಹುರುದಂಬಿಸಿದರು.

ಕೆಳಗಿಳಿದ ಬಳಿಕ ಕಟ್ಟಡದ ಮಾಲೀಕ ಪ್ರಮೋದ್ ಮಧ್ವರಾಜ್ ಜ್ಯೋತಿರಾಜ್ ಹಾಗೂ ತಂಡದವರನ್ನು ಅಭಿನಂದಿಸಿದರು.
ಅಡ್ವೆಂಚರ್ ಮಂಕಿ ಕ್ಲಬ್ ಫೌಂಡೇಶನ್ ಸ್ಥಾಪನೆಗಾಗಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ಕೋತಿರಾಜ್ ತನ್ನ ತಂಡದೊಂದಿಗೆ ಇಡೀ ರಾಜ್ಯಾದ್ಯಂತ ಸಂಚರಿಸಿ ಸಾಹಸ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.

See also  ಉಡುಪಿ: ಪಡಿತರ ವ್ಯವಸ್ಥೆಯಡಿ ಕುಚ್ಚಲಕ್ಕಿ ಖರೀದಿಸಿ ವಿತರಿಸಲು ಒಪ್ಪಿಗೆ ನೀಡಿದ ಕೇಂದ್ರ ಸರ್ಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು