News Kannada
Wednesday, March 29 2023

ಉಡುಪಿ

ಕಾರ್ಕಳ : ಸಚಿವ ಸುನೀಲ್‌ ಬೇನಾಮಿ ಆಸ್ತಿ ಕುರಿತು ತನಿಖೆ ನಡೆಸದಿದ್ದಲ್ಲಿ ಪ್ರತಿಭಟನೆ, ಮುತಾಲಿಕ್‌

Pramod Muthalik threatens to stage protest in front of Lokayukta office
Photo Credit : News Kannada

ಕಾರ್ಕಳ : ಸಚಿವ ಸುನೀಲ್ ಕುಮಾರ್ ಅವರ ಬೇನಾಮಿ ಆಸ್ತಿ ತನಿಖೆ ನಡೆಸಲು ಲೋಕಾಯುಕ್ತರು ಮೀನಮೇಷ ಎಣಿಸಿದರೆ ಲೋಕಾಯುಕ್ತ ಕಛೇರಿ ಎದುರೆ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮ ಸೇನೆಯ‌ ಪರಮೋಚ್ಛ ನಾಯಕ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಕಾರ್ಕಳ ನಿಟ್ಪಟೆ ಪರಪುವಿನ ಪಾಂಚಜನ್ಯ ಕಛೇರಿ ಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ದಾವಣಗೆರೆಯ ಚೆನ್ನಗಿರಿ ಶಾಸಕ ಮುಡಾಳು ವಿರೂಪಾಕ್ಷಪ್ಪ,  ದಾವಣಗೆರೆ ಶಾಸಕ ರವೀಂದ್ರ ನಾಥ್, ಮಾಯಾಕೊಂಡದ ಶಾಸಕ ಬಸವರಾಜ್ ನಾಯಕ್ , ಹೂವಿನ ಹಡಗಲಿ ಶಾಸಕ ಪರಮೇಶ್ವರ ನಾಯಕ್ , ವಿರುದ್ದ ಕಳೆದ 2013 ರಲ್ಲಿಯೇ ಶ್ರೀರಾಮ ಸೇನೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿತ್ರು.‌
ದಾವಣಗೆರೆ ನಗರಾಭಿವೃದ್ಧಿ ಇಲಾಖೆ ವತಿಯಿಂದ ಬಡವರಿಗಾಗಿ ನೀಡಲಾಗಿರುವ ಭೂಮಿ  ವಿಷಯಕ್ಕೆ ಸಂಬಂಧಿಸಿದಂತೆ ಶ್ರಿರಾಮ ಸೇನೆ ಲೋಕಾಯುಕ್ತಕ್ಕೆ ದೂರುಸಲ್ಲಿಸಿರುವ ಕುರಿತು ಉಲ್ಲೇಖಿಸಿದ ಅವರು ವಿಶೇಷ ಜನ ಪ್ರತಿನಿಧಿಯ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಶ್ರೀರಾಮ‌ಸೇನೆ ಭ್ರಷ್ಟಾಚಾರದ ವಿರುದ್ಧ ಸಮರ ಸಾರುತಿದೆ ಎಂದು ಗುಡುಗಿದರು.

ಹೆಬ್ರಿಯ ತಾಲೂಕಿನ ಶಿವಪುರ ಕೆರೆಬೆಟ್ಟುನಲ್ಲಿರುವ ಜಮೀನನ್ನು ಬಿಜೆಪಿ ಕಾರ್ಯಕರ್ತ ಗಜಾನಂದ ಹಾಗೂ ವಿದ್ಯಾ ಸುವರ್ಣ ಹೆಸರಿನಲ್ಲಿ ನೋಂದಣಿ ಮಾಡಲಾಗಿದ್ದು 67.94 ಎಕರೆ ಜಮೀನು ನಾಲ್ಕು ಕೋಟಿ ಹದಿನೈದು ಲಕ್ಷ ಕ್ಕೆ ಖರೀದಿಸಲಾಗಿದೆ. ಈ ಜಮೀನು ಸಚಿವ ಸುನೀಲ್ ಕುಮಾರ್ ಅವರ ಬೇನಾಮಿ ಆಸ್ತಿಯಾಗಿದೆ. ಫೆ.28 ರಂದು ಸಚಿವ ಸುನೀಲ್ ಕುಮಾರ್ ಬೇನಾಮಿ ಆಸ್ತಿಯ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದ್ದು ಮಾ.2 ರಂದು ಲೋಕಾಯುಕ್ತಕ್ಕೆ ದೂರು ದಾಖಲಿಸಲಾಗಿದೆ. ಈ ಜಮೀನನ್ನು ರೈತರನ್ನು ಬೆದರಿಸಿ ಹೆದರಿಸಿ ಮೋಸದಿಂದ ಕಡಿಮೆ ಬೆಲೆಗೆ ಖರೀದಿಸಲಾಗಿದೆ. ಬಿಜೆಪಿ ಕಾರ್ಯಕರ್ತ ಗಜಾನಂದ ನಿರುದ್ಯೋಗಿಯಾಗಿದ್ದು ಆತನಲ್ಲಿ ನಾಲ್ಕು ಕೋಟಿ ಹಣ ಎಲ್ಲಿಂದ ಬಂದಿದೆ ಎಂದು ಸಚಿವ ಸುನೀಲ್ ಕುಮಾರ್ ಉತ್ತರಿಸಲಿ ಎಂದು ಮುತಾಲಿಕ್ ಸವಾಲು ಹಾಕಿದರು.

ಮುಡಾಳು ವಿರೂಪಾಕ್ಷ ಅವರ ಹಗರಣದ ಬಗ್ಗೆ 2013 ರಲ್ಲಿ ದೂರು ದಾಖಲಿಸಿದ್ದು 2023 ವಿಚಾರಣೆಗೆ ಬಂದಿದ್ದು ಹತ್ತು ವರ್ಷಗಳ ಕಾಲ ಲೋಕಾಯುಕ್ತ ಸುಮ್ಮನೆ ಕುಳಿತಿದೆ. ಸಚಿವ ಸುನೀಲ್ ಕುಮಾರ್ ಬೇನಾಮಿ ಆಸ್ತಿ ತನಿಖೆಯನ್ನು ಲೋಕಾಯುಕ್ತರು ವೇಗವಾಗಿ ವಹಿಸಿಕೊಂಡು ಸತ್ಯವನ್ನು ಜನತೆಗೆ ತಿಳಿಸಬೇಕು .

ಮೈಸೂರಿನಲ್ಲಿ ಬಿಡುಗಡೆಯಾದ ಆಡಿಯೋ ಬಗ್ಗೆ ಮಾತನಾಡಿದ ಮುತಾಲಿಕ್ ಸಚಿವ ಸುನೀಲ್ ಕುಮಾರ್ ಟೆಂಡರ್ ಬಿಡುಗಡೆಗಾಗಿ ಶೇ 3  ಕಮಿಷನ್ ಪಡೆಯುತಿದ್ದು , ಇಂದನ ಕೆಪಿಟಿಸಿಎಲ್ ನ ಲ್ಲಿ ಕೇವಲ ಒಂದೆ ತಿಂಗಳಲ್ಲಿ ತರಾತುರಿಯಲ್ಲಿ 800 ಕೋಟಿಯ ಟೆಂಡರ್ ಪಾಸ್ ಮಾಡಲಾಗಿದೆ .ಅದರಲ್ಲಿ  ಶೇ 3 ಕಮಿಷನ್ ಪಡೆಯುತಿದ್ದಾರೆ ಎಂದರೆ ಬ್ರಹ್ಮಾಂಡ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.‌

ಕೋವಿಡ್ ಸಮಯದಲ್ಲಿ 5000 ಕಟ್ಟಡ ಕೂಲಿ ಕಾರ್ಮಿಕರಿಗೆ ಬಿಡುಗಡೆ ಮಾಡಲಾದ ಕಿಟ್ ಅನ್ನು ಕಾರ್ಮಿಕರಿಗೆ ಒದಗಿಸದೆ ಅನ್ಯಾಯವೆಸಗಿರುವುದು ಎಲ್ಲರಿಗೂ ತಿಳಿದಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹಗರಣಗಳನ್ನು ಹೊರಚೆಲ್ಲಲಾಗುವುದು ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.

See also  ಕಡಲ್ಕೊರೆತ ಪ್ರದೇಶವಾದ ಸೀಗ್ರೌಂಡ್ ಬಳಿಗೆ ಶಾಸಕ ಯು.ಟಿ ಖಾದರ್ ಭೇಟಿ

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಿದೆ , ನನ್ನ ಬೆಂಬಲ ಕೇಂದ್ರ ಸರಕಾರಕ್ಕೆ ಆದರೆ ರಾಜ್ಯದ ಮಂತ್ರಿಗಳು ಹಗರಣದಲ್ಲೆ ಮುಳುಗಿದ್ದಾರೆ. ನನ್ನ ಹೋರಾಟ ಭ್ರಷ್ಟಾಚಾರ ವಿರುದ್ಧದ ಸಮರ, ಈಗಾಗಲೇ ನನ್ನ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸುತಿದ್ದಾರೆ . ಇನ್ನೂ ನಾನು ಸುಮ್ಮನೆ ಕೂರಲ್ಲ ಎಂದು ಕಾರ್ಯಕರ್ತರ ಜೊತೆಗೆ ನಾನಿರುವೆ ಎಂದು ಎಂದು ಮುತಾಲಿಕ್ ಕಟುವಾಗಿ ಎಚ್ಚರಿಕೆ ನೀಡಿದರು.

ಕಾರ್ಕಳ ತಾಲೂಕಿನಲ್ಲಿ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ , ಪರಶುರಾಮ ಥೀಮ್ ಪಾರ್ಕ್ , ಕಾರ್ಕಳ ಉತ್ಸವ ಮಾಡಿರುವುದು ಸ್ವಾಗತಾರ್ಹ ,ಆದರೆ ಅದನ್ನು ಹೇಳಿಕೊಂಡು ತಿರುಗುವುದು ಸಮಂಜಸವಲ್ಲ , ಎಂದು ಮುತಾಲಿಕ್ ಹೇಳಿದರು ಹೆಬ್ರಿ ತಾಲೂಕಿನಲ್ಲಿ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ ಗಳಿವೆ ಅದನ್ನು ಗಮನ ಗಮಹರಿಸುತಿಲ್ಲ ಎಂದು ಮುತಾಲಿಕ್ ಅರೋಪಿಸಿದರು.

ಸುದ್ದಿ ಗೋಷ್ಠಿ ಯಲ್ಲಿ ವಕೀಲ ಹರೀಶ್ ಅಧಿಕಾರಿ , ಪುರಸಭಾ ಸದಸ್ಯ ಲಕ್ಷ್ಮಿ ನಾರಾಯಣ ಮಲ್ಯ, ನಿಟ್ಟೆ ಗ್ರಾ.ಪಂ ಸದಸ್ಯ ಸುಹಾಸ್ ಹೆಗ್ಡೆ , ಮಹಿಳಾ ಪ್ರತಿನಿಧಿ ದಿವ್ಯಾ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು