News Kannada
Wednesday, March 29 2023

ವಿಶೇಷ

ಮಲ್ಲಿಗೆ ಕೃಷಿ ಮೂಲಕ ಮಾದರಿಯಾದ ಹೆಮ್ಮಾಡಿಯ ಮಹಿಳೆ: ತಿಂಗಳಿಗೆ 20 ಸಾವಿರ ರೂ. ಆದಾಯ

Farmer woman enjoying farming
Photo Credit : News Kannada

ಕುಂದಾಪುರ: ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಕಟ್ಟು ನಿವಾಸಿ ಉಷಾ ಆನಂದ ಗಾಣಿಗ ಅವರು ತಮ್ಮ ಎರಡು ಎಕರೆ ಕೃಷಿಭೂಮಿಯಲ್ಲಿ 17 ವರ್ಷಗಳಿಂದ ಹಲವು ಬಗೆಯ ಬೆಳೆಗಳನ್ನು ಬೆಳೆಯುವ ಮುಖೇನ ಕೃಷಿಯಲ್ಲಿ ಜೀವನವನ್ನು ಕಂಡುಕೊಂಡಿದ್ದಾರೆ.

ಮುಂಗಾರಿನಲ್ಲಿ ಭತ್ತವನ್ನು ಬೆಳೆಯುತ್ತಾರೆ ಹಿಂಗಾರು ಮತ್ತು ಬೆಸಿಗೆಯಲ್ಲಿ ಬಾವಿ ಮತ್ತು ಕೆರೆಯ ನೀರನ್ನು ಉಪಯೋಗಿಸಿಕೊಂಡು ತೊಂಡೆ,ಬೆಂಡೆ,ಬಸಳೆ, ಮಲ್ಲಿಗೆ ಕೃಷಿ ಮಾಡುತ್ತಾರೆ ತಿಂಗಳಿಗೆ ಸರಿ ಸುಮಾರು 20,000 ರೂ ಆದಾಯವನ್ನು ಗಳಿಸುವುದರ ಮುಖಾಂತರ ಮಕ್ಕಳಿಬ್ಬರಿಗೆ ವಿದ್ಯಾಭ್ಯಾಸ ನೀಡುವುದರ ಜತೆಗೆ ಸಂಸಾರಕ್ಕೆ ಹೆಗಲಾಗಿ ನಿಂತಿದ್ದಾರೆ.

ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು 40 ಸೆಂಟ್ಸ್ ಜಾಗದಲ್ಲಿ 200 ಕ್ಕೂ ಅಧಿಕ ಮಲ್ಲಿಗೆ ಗಿಡಗಳನ್ನು ಬೆಳೆಸಿದ್ದಾರೆ.ಮಲ್ಲಿಗೆ ಹೂವಿನ ಅಟ್ಟಿಯನ್ನು ಬಸ್ಸಿನ ಮೂಲಕ ಮಂಗಳೂರಿಗೆ ಸಪ್ಲೈ ಮಾಡುತ್ತಾರೆ,ಕಸಿ ಕಟ್ಟಿದ ಮಲ್ಲಿಗೆ ಗಿಡವನ್ನು ಸಹ ಮಾರಾಟ ಮಾಡಿ ಉತ್ತಮವಾದ ಆದಾಯವನ್ನು ಗಳಿಸುತ್ತಿದ್ದಾರೆ ಮಲ್ಲಿಗೆ ಗಿಡಗಳಿಗೆ ನೆಲಗಡಳೆ ಹಿಂಡಿ,ಕೊಟ್ಟಿಗೆ ಗೊಬ್ಬರವನ್ನು ನೀಡುತ್ತಾರೆ.

ಆಧುನಿಕ ಶೈಲಿಯ ಬಸಳೆ ಚಪ್ಪರವನ್ನು ನಿರ್ಮಿಸಿಕೊಂಡು ಉಷಾ ಗಾಣಿಗ ಅವರು 10 ಸೆಂಟ್ಸ್ ಜಾಗದಲ್ಲಿ ಬಸಳೆಯನ್ನು ಬೆಳೆಯುತ್ತಿದ್ದಾರೆ ಬಸಳೆ ಜತೆಗೆ 20 ಸೆಂಟ್ಸ್ ಜಾಗದಲ್ಲಿ ಬೆಂಡೆ ಮತ್ತು ತೊಂಡೆ ಕಾಯಿಯನ್ನು ಕೂಡ ಬೆಳೆಯುತ್ತಾರೆ ಬೆಳೆದ ಬೆಳೆಯನ್ನು ಪತಿ ಆನಂದ ಗಾಣಿಗ ಅವರ ಸಹಕಾರದೊಂದಿಗೆ ಕುಂದಾಪುರ ಮಾರುಕಟ್ಟೆಗೆ ಸಾಗಿಸುತ್ತಾರೆ.

ಉಷಾ ಗಾಣಿಗ ಅವರು ಇತರ ಮಹಿಳೆಯರಿಗೆ ಆದರ್ಶವಾಗಿದ್ದಾರೆ.

See also  ಬೆಂಗಳೂರು: 2023 ರ ಚುನಾವಣೆಯಲ್ಲಿ ಬಿಜೆಪಿ ವಿಜಯಶಾಲಿ- ಸಿಎಂ ಬೊಮ್ಮಾಯಿ ವಿಶ್ವಾಸ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು