News Kannada
Sunday, April 02 2023

ಉಡುಪಿ

ಉಡುಪಿ: ಭೂ ಮಾಲೀಕರಿಗೆ ಶಾಸಕರಿಂದ ಉಡುಪಿ ಕೇದಾರ ಕಜೆ ಕುಚ್ಚಲಕ್ಕಿ ವಿತರಣೆ

Mla distributes Udupi Kedar Kaje Kuchchalakki to land owners
Photo Credit : News Kannada

ಉಡುಪಿ: ಕೇದಾರೋತ್ಥಾನ ಟ್ರಸ್ಟ್ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗಿದ್ದು, ಈ ಕೃಷಿ ಕಾರ್ಯಕ್ಕೆ ಕೃಷಿ ಭೂಮಿಯನ್ನು ನೀಡಿದ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೂ ಮಾಲೀಕರಿಗೆ ಕೃತಜ್ಞತಾ ಪೂರ್ವಕವಾಗಿ ಉಡುಪಿ ಕೇದಾರ ಕಜೆ ಕುಚ್ಚಲಕ್ಕಿಯನ್ನು ಇಂದು ನೀಡಲಾಯಿತು.

ಶಾಸಕರು, ಕೇದಾರೋತ್ಥಾನ ಟ್ರಸ್ಟ್ ನ ಅಧ್ಯಕ್ಷ ಕೆ. ರಘುಪತಿ ಭಟ್ ಅವರು ಭೂ ಮಾಲಕರಿಗೆ ಕೇದಾರಕಜೆ ಕುಚ್ಚಲಕ್ಕಿ ವಿತರಿಸಿ, ಹಡಿಲು ಭೂಮಿ ಕೃಷಿಗೆ ಭೂಮಿಯನ್ನು ನೀಡಿದ ಭೂ ಮಾಲೀಕರಿಗೆ ಅಭಿನಂದನೆ ಸಲ್ಲಿಸಿದರು. ಮುಂದಿನ ಭಾರಿ ಭೂ ಮಾಲೀಕರೆ ಅವರ ಗದ್ದೆಯಲ್ಲಿ ಕೃಷಿ ಮಾಡಬೇಕು. ಒಂದು ವೇಳೆ ಹಡಿಲು ಬಿಟ್ಟರೆ ಅಂತಹ ಭೂಮಿಯಲ್ಲಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಕೃಷಿ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೇದಾರೋತ್ಥಾನ ಟ್ರಸ್ಟ್ ನ ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ, ಟ್ರಸ್ಟಿಗಳಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಸ್ಥಳೀಯ ರೈತರು ಉಪಸ್ಥಿತರಿದ್ದರು.

See also  ಕಾರವಾರ: ಭೀಮ್‌ಕೋಲ್ ಕೆರೆ ದಡದಲ್ಲಿ ಸರಕಾರದ ಅದೇಶದಂತೆ ಹಿರಿಯ ನಾಗರಿಕರಿಂದ ರಾಷ್ಟ್ರ ಧ್ವಜಾರೋಹಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು