News Kannada
Saturday, June 03 2023
ಉಡುಪಿ

ಕಾರ್ಕಳ: ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದು ದಾಖಲೆ ಸಮೇತ ಮೋದಿಯವರಿಗೆ ದೂರು- ಮುತಾಲಿಕ್

Karkala: Muthalik exposes corruption cases, lodges complaint with PM Modi with documents
Photo Credit : News Kannada

ಕಾರ್ಕಳ: ಕಾರ್ಕಳ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದು ಅದರ ದಾಖಲೆಗಳನನ್ದು ಕ್ರೋಡಿಕರಿಸಿ ಪ್ರಧಾನಿ ನರೇಂದ್ರ ಮೋದಿ ಯವರಿಗೆ ದೂರು ನೀಡುವುದಾಗಿ ಶ್ರೀ ರಾಮಸೇವಾ ಸವೋಚ್ಛ ನಾಯಕ ಪ್ರಮೋದ್ ಮುತಾಲಿಕ್ ಹೇಳಿದರು.

ಕುಕ್ಕುಂದೂರು ಪರಪ್ಪುವಿನ ಪಾಂಚ್ಯಜನ್ಯ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೀಗಾಗಲೇ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ಬಯಲಿಗೆಳೆದು ಅಗತ್ಯ ದಾಖಲೆ ಪತ್ರಗಳೊಂದಿಗೆ ಲೋಕಾಯುಕ್ತ ದೂರು ನೀಡಿರುವುದಾಗಿ ತಿಳಿಸಿದರು. ಈಗ ಮೂರನೇ ಹಂತಗದಲ್ಲಿ ನಾಲ್ಕು ಭ್ರಷ್ಟಚಾರ ಪ್ರಕರಣಗಳ ಬಯಲು ಮಾಡಿ ದಾಖಲೆ ಸಮೇತಾ ಯೋಕಾಯುಕ್ತಕ್ಕೆ ದೂರು ನೀಡುವುದಾಗಿ ತಿಳಿಸಿದರು.

ಪೊಟ್ಟು ಕೆರೆ ಅಭಿವೃದ್ಧಿಯಿಂದ ಏನು ಸಾಧ್ಯ?
ಕಣಂಜಾರು ಗ್ರಾಮ ಪಡುಕಟ್ಟೆ ಎಂಬಲ್ಲಿ ಹಲವು ವರ್ಷಗಳಿಂದ ನಿರುಪಯುಕ್ತವಾಗಿದ್ದ (ಪೊಟ್ಟು ಕೆರೆ)ಯನ್ನು ಕುಡಿಯಲು ಹಾಗೂ ಇತರ ಉಪಯೋಗಕ್ಕಾಗಿ ೧೦ ಲಕ್ಷ ಮೌಲದಲ್ಲಿ ಅಭಿವೃದ್ಧಿ ಪಡಿಸಿರುವುದಾಗಿ ದಾಖಲೆಯಲ್ಲಿದೆ. ಅನುದಾನವು ಅದಕ್ಕೆ ವಿನಿಯೋಗವಾಗಿ ಆದರೆ ಅಲ್ಲಿ ೧೦ ಸಾವಿರ ರೂಪಾಯಿ ಕಾಮಗಾರಿ ನಡೆದಿಲ್ಲ. ಆದರೂ ಇನ್ನೂ ೧೫ ಲಕ್ಷ ಅಭಿವೃದ್ಧಿಗಾಗಿ ಬೇಡಿಕೆಯನ್ನು ಇಟ್ಟಿರುವುದು ಬಯಲಾಗಿದೆ. ಒಟ್ಟಾರೆ ಈ ಕಾಮಗಾರಿಗಾಘಿ ರೂ.೨೫ ಲಕ್ಷ ವಿನಿಯೋಗವಾದರೂ ಊರಿಗೆ ಅನುಕೂಲವಾಗುದಿಲ್ಲ. ಇದೊಂದು ವ್ಯವಸ್ಥಿತವಾದ ಭಷ್ಟಚಾರ ಹಾಘೂ ಹಣ ಲೂಟಿ ಯೋಜನೆಯ ಭಾಗವಾಗಿದೆ ಎಂದರು.

ಅದೇ ಊರಿನ ಪುರಾತನವಾದ ಜಡ್ಡಿನಕಟ್ಟೆ ಕೆರೆ ಇದ್ದು ಆ ಕೆರೆಯನ್ನು ಮುಚ್ಚಿ ಅಕ್ರಮ ಗಣಿಕಾರಿಕೆ ನಡೆಯುತ್ತಿತ್ತು. ತೀರ್ಥ ಹಳ್ಳಿಯ ಶರೀಫ್ ಎಂಬವರು ಅದನ್ನು ನಡೆಸುತ್ತಿದ್ದರು. ಅದನ್ನು ಮನಗಡು ನಮ್ಮ ಸಂಘಟನೆಯ ಪ್ರಮುಖರಾದ ದಿವ್ಯ ಹಾಗೂ ಇತರರ ಮುಖಂತರ ಹೋರಾಟ ನಡೆಸಿ ಫಲವಾಗಿ ಈಗ ಅಕ್ರಮಗಣಿಗಾರಿಕೆ ನಿಲುಗಡೆಯಾಗಿದೆ ಎಂಬುದರ ಕುರಿತು ಮಾಹಿತಿ ನೀಡಿದರು.

ಸ್ಥಾಪಿತ ಹಿತಾಸಕ್ತಿಯ ಕುಮ್ಮುಕ್ಕಿನಿಂದ ಆ ಗಣಿಗಾರಿಕೆ ಆರಂಭಕ್ಕೆ ತಯಾರಿ ನಡೆಯುತ್ತಿದೆ. ಮುಂದೆ ಉಂಟಾಗುವ ಎರಡು ತೊಡರಿಗೆ ಜಿಲ್ಲಾಡಳಿತವೇ ನೇರ ಹೊಣೆಗಾರಿಕೆಯಾಗಿದೆ ಎಂದರು.

 

See also  ಬೆಂಗಳೂರು: ಎಲೆಕ್ಷನ್ ಮುಗಿವವರೆಗೆ 'ಸಂತೋಷ' ಆಟವಿಲ್ಲ? ಬಿಜೆಪಿ ಕಾಲೆಳೆದ ಕಾಂಗ್ರೆಸ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು