News Kannada
Sunday, June 04 2023
ಉಡುಪಿ

ಬೈಂದೂರಿಗೆ ತಾಲೂಕು ಕಚೇರಿ ಅನುಮೋದನೆ ಆಗಿದ್ದು ನನ್ನ ಅವಧಿಯಲ್ಲೇ- ಕೆ.ಗೋಪಾಲ ಪೂಜಾರಿ

Byndoor taluk office was approved during my tenure: K Gopala Poojary
Photo Credit : News Kannada

ಕುಂದಾಪುರ: ಬೈಂದೂರು ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದೇನೆ. ಅಧಿಕಾರ ಇಲ್ಲದೆ ಇದ್ದಾಗಲೂ ಜನ ಸೇವೆ ಸದಾ ನನ್ನನ್ನು ಮುಡುಪಾಗಿರಿಸಿಕೊಂಡಿದ್ದೇನೆ. ಬೈಂದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಬೈಂದೂರಿಗೆ ತಾಲೂಕು ಕಚೇರಿ ಅನುಮೋದನೆ ಆಗಿದ್ದು ನನ್ನ ಅವಧಿಯಲ್ಲೇ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ನಾಮಪತ್ರ ಸಲ್ಲಿಕೆ ಮುನ್ನ ಆಯೋಜಿಸಿದ ಬಹಿರಂಗ ಸಭೆಯಲ್ಲಿ ಕಾರ್ಯಕರ್ತರನ್ನುದ್ದೆಶೀಸಿ ಅವರು ಮಾತನಾಡಿದರು.

ಕಳೆದ ಐದು ವರ್ಷಗಳಿಂದ ಬಿಜೆಪಿ ಪಕ್ಷದ ಶಾಸಕರಿದ್ದರೂ ಬೈಂದೂರು ಬಸ್ ಡಿಪೋ ಉದ್ಘಾಟನೆ ಭಾಗ್ಯ ಕಂಡಿಲ್ಲ,ನಾನು ಶಾಸಕನಾಗಿದ್ದಾಗ ಬಸ್ ಡಿಪೋ ನಿರ್ಮಾಣಕ್ಕೆ ಜಾಗ ಗುರುತಿಸಿದ್ದರು ಉದ್ದೇಶ ಪೂರ್ವಕವಾಗಿ ವಿರೋಧಿಸಿದ್ದವರು ಅದೇ ಜಾಗದಲ್ಲಿ ಕೆರೆಯನ್ನು ಮುಚ್ಚಿ ಕಾಮಗಾರಿ ಮಾಡಿದ್ದಾರೆ ಎಂದರು.

ಗ್ಯಾಸ್ ಬೆಲೆ ಹತ್ತು ರೂಪಾಯಿ ಏರಿಕೆ ಆಗಿದ್ದಾಗ ಕೂಗಿದವರು ಈಗ ಏಲ್ಲಿ ಗೋಪಾಲ ಪೂಜಾರಿ ಪ್ರಶ್ನೆ:                                  ಕಾಂಗ್ರಸ್ ಪಕ್ಷ ಅಧಿಕಾರದಲ್ಲಿದ್ದಾಗ ಗ್ಯಾಸ್ ಬೆಲೆ ಹತ್ತು ರೂಪಾಯಿ ಏರಿಕೆ ಆದಾಗ ಕುಂದಾಪುರ ಶಾಸ್ತ್ರೀ ಸರ್ಕಲ್‍ನಲ್ಲಿ ಶೋಭಾ ಕರಂದ್ಲಾಜೆ ಅವರು ಪ್ರತಿಭಟನೆ ನಡೆಸಿದ್ದರು ಈಗ ಸಾವಿರ ಗಡಿ ದಾಟಿದರು ಅವರು ಏಲ್ಲಿ ಹೋಗಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಕೋಟ ಶ್ರೀನಿವಾಸ ಪೂಜಾರಿ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ಗೋಪಾಲ ಪೂಜಾರಿ ಅವರು ನೈತಿಕತೆ ಇಲ್ಲದೆ ಹಿಂಬಾಗಿಲಿನ ರಾಜಕೀಯ ಮಾಡುವ ನಿಮ್ಮಿಂದ ಸರಳತೆಯ ಪಾಠ ಕಲಿಯಬೇಕಿಲ್ಲ ಎಂದು ಕೂಟುಕಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾಂಗ್ರೆಸ್ ಪಕ್ಷದ ಯುವ ಮುಖಂಡ ವಿಕಾಸ್ ಹೆಗ್ಡೆ, ಪ್ರಕಾಶ್ಚಂದ್ರ ಶೆಟ್ಟಿ, ಎಸ್ ರಾಜು ಪೂಜಾರಿ, ಬೈಂದೂರು ಬ್ಲಾಕ್ ಅಧ್ಯಕ್ಷ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ, ಡಾ.ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

See also  ಬೆಂಗಳೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ವಜಾಗೊಳಿಸಬೇಕೆಂದು ಆರ್‌ಯುಪಿಎಸ್‌ಎ ಆಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು