ಕುಂದಾಪುರ: ಬೈಂದೂರು ವಿಧಾನಸಭೆ ಕ್ಷೇತ್ರದ ಶಿರೂರು ನಿಂದ ಮುದೂರು ತನಕ ಬೃಹತ್ ರೋಡ್ ಶೋ ನಡೆಯಿತು. ಮಹಾರಾಷ್ಟ್ರ ರಾಜ್ಯದ ಮಾಜಿ ಸಿಎಂ.ಚೌಹಾಣ್ ರೋಡ್ ಶೋ ನಲ್ಲಿ ಭಾಗವಹಿಸಿ ಗೋಪಾಲ ಪೂಜಾರಿ ಪರವಾಗಿ ಮತಯಾಚನೆ ಮಾಡಿದರು.
ಶಿರೂರಿನಿಂದ ಆರಂಭಗೊಂಡಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ರೋಡ್ ಶೋ ಬೈಂದೂರು, ಉಪ್ಪುಂದ, ಬಿಜೂರು, ಹೊಸ್ಕೋಟೆ, ಹೇರಂಜಾಲು, ಕಾಲ್ತೋಡು, ಯಡ್ತರೆ, ತೆಗ್ಗರಸೆ,ಏಳಜಿತ್, ಗೋಳಿಹೊಳೆ, ಅರೆಶಿರೂರು, ಎಲ್ಲೂರು, ಹಾಲ್ಕಲ್, ಕೊಲ್ಲೂರು, ಜಡ್ಕಲ್ ವರೆಗೆ ಸಾಗಿತು, ರೋಡ್ ಶೋನಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿ ಗೋಪಾಲ ಪೂಜಾರಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕಿದರು.
ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೋಪಾಲ ಪೂಜಾರಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.