ಮಲ್ಪೆ ಬಂದರಿನಲ್ಲಿ ಮೀನುಗಾರ ಮಹಿಳೆಯರು ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆ ಇಂದು ನಡೆದಿದೆ.
ಬಿಜೆಪಿಯವರು ಈವರೆಗೆ ನಮಗೆ ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ. ನಾವು ಯಾರಿಗೂ ಹೆದರುವುದಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಮಗೆ ಸೊಸೈಟಿಯಿಂದ ಎಲ್ಲ ಪಡಿತರ ಸಿಗುತ್ತಿತ್ತು. ಈಗ ಅಕ್ಕಿ ಬಿಟ್ಟರೆ ಏನು ಇಲ್ಲ ಎಂದು ಮೀನುಗಾರ ಮಹಿಳೆಯರು ಆರೋಪಿಸಿದರು.
ಬಂಗಾರ ಬೆಲೆ ಏರಿಕೆಯಾಗಿದೆ. ಇದರಿಂದ ಬಡವರು ಮದುವೆ ಹೇಗೆ ಮಾಡುವುದು. ಅಕ್ಕಿ, ಗ್ಯಾಸ್, ಉಪ್ಪಿಗೂ ಬೆಲೆ ಜಾಸ್ತಿಯಾಗಿದೆ. ವಿದ್ಯುತ್ ಬಿಲ್ ಕೂಡ ಹೆಚ್ಚು ಬರುತ್ತಿದೆ. ಬಿಜೆಪಿಯಿಂದ ಯಾವುದೇ ಪ್ರಯೋಜನ ಇಲ್ಲ. ಹಣ ಇದ್ದವರು ಬದುಕುತ್ತಾರೆ. ಬಡವರು ಏನು ಮಾಡಬೇಕು. ಭಿಕ್ಷೆ ಬೇಡಿ ಬದುಕುವ ಪರಿಸ್ಥಿತಿ ಬಂದಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.