News Kannada
Saturday, September 23 2023
ಉಡುಪಿ

ನಾಗರಿಕ ಸಮಿತಿಯಿಂದ ಬೆಲ್ಲದ ಗಣಪತಿ ಪ್ರದರ್ಶನ

Ganpati display of jaggery by civic body
Photo Credit : News Kannada

ಉಡುಪಿ: ನಾಗರಿಕ ಸಮಿತಿಯ ಆಯೋಜನೆ ಮತ್ತು ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಗಣೇಶ ಚತುರ್ಥಿಯನ್ನು ವಿನೂತನ ರೀತಿಯಲ್ಲಿ ಪರಿಸರ ಸ್ನೇಹಿಯಾಗಿ ಮಾರುಥಿ ವೀಥಿಕಾದಲ್ಲಿ ಆಚರಿಸಲಾಯಿತು.

ಆಲೆಮನೆಯಲ್ಲಿ ನುರಿತ ಕಲಾವಿದರಿಂದ ಎರಡಡಿ ಚೌಕಾಕೃತಿಯ ಬೆಲ್ಲದ ಗಟ್ಟಿಯಲ್ಲಿ ಗಣಪತಿಯನ್ನು ನಾಜೂಕಿನಿಂದ ಕೆತ್ತಿಸಿ, ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಉಡುಪಿಗೆ ತರಿಸಿದ್ದರು. ವಿನೂತನ ರೀತಿಯ ಗಣಪತಿ ವೀಕ್ಷಿಸಿ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು. ಭಕ್ತರ ಒತ್ತಾಯದ ಮೆರೆಗೆ ಬೆಲ್ಲದ ಗಣಪತಿಯನ್ನು ಗುರುವಾರದ ತನಕ ವೀಕ್ಷಣೆಗೆ ಇಡಲು ತಿರ್ಮಾನಿಸಿದ್ದಾರೆ.

ಪ್ರದರ್ಶನ ಕಾರ್ಯಕ್ರಮವನ್ನು ಪರಿಸರ ತಜ್ಞ ಡಾ. ಸತೀಶ್ ನಾಯ್ಕ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಬಾಸ್ಕರ್ ಶೇರಿಗಾರ್, ಜೋಸ್ ಆಲುಕಾಸ್ ಆಭರಣ ಮಳಿಗೆಯ ವ್ಯವಸ್ಥಾಪಕ ರಾಜೇಶ್ ಎನ್ ಆರ್, ಹಾಗೂ ಗೋಪಾಲ್, ಬೀಮಾ ಆಭರಣ ಮಳಿಗೆಯ ಅಷ್ಮತ್ ರಾವ್, ಶ್ರೀನಿಧಿ ಭಟ್, ಕೊಟೆಕ್ ಮಹೇಂದ್ರ ಬ್ಯಾಂಕಿನ ಸಿಬಂದಿ, ನಾಗರಿಕ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

See also  ಸ್ವಾರ್ಥಕ್ಕಾಗಿ 'ಇಂಡಿಯಾ' ಕೂಟ: ಸಚಿವ ಭಗವಂತ ಖೂಬಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು