ಕಾರ್ಕಳ, ಎ.28: ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಮುಖಂಡರು ಆಗಿದ್ದ ದಿವಂಗತ ನರಸಿಂಹ ನಾಯಕ ಪುತ್ರ ಹೆಬ್ರಿ ಕನ್ಯಾನ ರೈತ ಸೇವಾ ಗ್ರಾಮೋದ್ಯೋಗ ಉದ್ದಿಮೆಯ ಮಾಲಕರು, ಕನ್ಯಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು, ಹೆಬ್ರಿ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷರಾದ ಲಕ್ಷ್ಮಿ ನಾರಾಯಣ ನಾಯಕ್ ತಮ್ಮ ಬೆಂಬಲಿಗರಾದ ಅರುಣ್ ಶೆಟ್ಟಿ ಕನ್ಯಾನ, ಪ್ರವೀಣ ಪೂಜಾರಿ, ಜಯಾನಂದ ಕುಲಾಲ್, ಕಾರ್ತಿಕ್ ರವರೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ವಿ ಸುನಿಲ್ ಕುಮಾರ್ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಕ್ಷೇತ್ರ ಅಧ್ಯಕ್ಷರಾದ ಮಹಾವೀರ ಹೆಗಡೆ, ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ಬಿಜೆಪಿಯ ಪ್ರಮುಖರಾದ ರವೀಂದ್ರ ಮಡಿವಾಳ, ಮುನಿಯಾಲು ದಿನೇಶ್ ಪೈ, ಗುರುದಾಸ ಶೆಣೈ, ಜ್ಯೋತಿ ಹರೀಶ್, ಗಣೇಶ್ ಕುಮಾರ್, ಸುಧಾಕರ್ ಹೆಗಡೆ, ರಮೇಶ ಕುಮಾರ್, ಸುಧಾಕರ್ ಎಚ್, ಶೋಧನ ಹೆಗಡೆ, ಪ್ರಸನ್ನ ಶೆಟ್ಟಿ, ಸೀತಾರಾಮ ಗಾಣಿಗ, ಶೇಖರ, ತಾರಾನಾಥ ಬಂಗೇರ , ಜಯ ಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.