News Kannada
Saturday, September 23 2023
ಉಡುಪಿ

ಬಾಗಲಕೋಟೆಯಲ್ಲಿ ಹೋಟೆಲ್ ಕಾರ್ಮಿಕನಿಗೆ ಅನ್ಯಾಯ ವಿಚಾರ: ಬೈಂದೂರು ಠಾಣೆಯಲ್ಲಿ ಇತ್ಯರ್ಥ

Hotel worker's complaint in Bagalkot disposed of at Byndoor police station
Photo Credit : News Kannada

ಬೈಂದೂರು: ಕೆಲವು ದಿವಸದ ಹಿಂದೆ ಬಾಗಲಕೋಟೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ ಎಂಬಾತನಿಗೆ ಹೋಟೆಲ್ ಮಾಲೀಕರಿಂದ ಕೆಲಸದ ಸಂಬಳ ನೀಡದೆ ಅನ್ಯಾಯ ಮಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.

ಆ ಸುದ್ದಿಯ ಬೆನ್ನತ್ತಿದ ಹೋಟೆಲ್ ಕಾರ್ಮಿಕ ಸಂಘಟನೆ ನಾನಾ ರೀತಿಯ ಪ್ರಯತ್ನ ಪಟ್ಟರು ಸಂಬಳ ಕ್ಲಿಯರ್ ಆಗುವ ಪ್ರಮೇಯ ಕಾಣಲಿಲ್ಲ,

ಕೊನೆಯ ಪ್ರಯತ್ನವೆಂಬಂತೆ ದೂರುದಾರರ ಸುರೇಶನ ಮಡದಿಯ ಮುಖಾಂತರ ಇವತ್ತು ಬೈಂದೂರು ಆರಕ್ಷರ ಠಾಣೆಯಲ್ಲಿ ದೂರು ದಾಖಲಿಸಲಾಯಿತು,

ದೂರು ನೀಡಿದ ತಕ್ಷಣ ವಿಚಾರಣೆ ನಡೆಸಿದ ಬೈಂದೂರು ಠಾಣಾ ಪೊಲೀಸರು ಹೋಟೆಲ್ ಮಾಲೀಕರನ್ನು ಪೊಲೀಸ್ ಸ್ಟೇಷನ್ ಗೆ ಕರೆದು ವಿಚಾರಿಸಿದಾಗ, ಮಾಲಿಕ ನಾವು ಹೋಟೆಲ್ ಅನ್ನು ಲೀಸಿಗೆ ಕೊಟ್ಟಿದ್ದೇವೆ,ಸಂಬಳ ಬಾಕಿ ಇರುವ ವಿಷಯ ನನ್ನ ಗಮನಕ್ಕೆ ಬಾರದೆ ಇದ್ದುದರಿಂದ ಸಂಬಳ ಕ್ಲಿಯರ್ ಮಾಡ್ಲಿಕ್ಕೆ ಆಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು,

ಹೋಟೆಲ್ ಮಾಲೀಕ ಪೊಲೀಸರ ಸಮ್ಮುಖದಲ್ಲಿ ದೂರುದಾರರಿಗೆ ಬರಬೇಕಾಗಿದ್ದ 25,000 ರೂ. ನೀಡಿ ಪ್ರಕರಣ ಇತ್ಯರ್ಥ ಗೊಳಿಸಿದರು

ಈ ಸಂದರ್ಭದಲ್ಲಿ ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘಟನೆಯ ಪ್ರತಿನಿಧಿಯಾಗಿ ಪುರುಷೋತ್ತಮ್ ಪೂಜಾರಿ ಉಡುಪಿ ಉಪಸ್ಥಿತರಿದ್ದರು.ಈ ಪ್ರಕರಣವನ್ನು ಸುಖಾಂತ್ಯ ಆಗುವುದರಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳಿಗೂ ಹಾಗೂ ಹೋಟೆಲ್ ಮಾಲೀಕರಿಗೂ ಹೋಟೆಲ್ ಕಾರ್ಮಿಕ ಸಂಘದ ಪರವಾಗಿ ಅಭಿನಂದನೆ ಹೇಳಿದರು

See also  ಸಂತ್ರಸ್ತರ ಕುಟುಂಬ ಅನಾನುಕೂಲತೆ ಎದುರಿಸುವಂತಾಗಬಾರದು: ಪ್ರಧಾನಿ ನರೇಂದ್ರ ಮೋದಿ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು