News Kannada
Wednesday, May 31 2023
ಉಡುಪಿ

ಮುತಾಲಿಕ್‌ ಕಾಂಗ್ರೆಸ್‌ ಬೀ ಟೀಮ್‌ ಆರೋಪ, ಕಾರ್ಕಳ ಮಾರಿಯಮ್ಮ ಸನ್ನಿಧಿಯಲ್ಲಿ ಪ್ರಮಾಣಕ್ಕೆ ಸವಾಲು

I will take part in the struggle for Hindutva
Photo Credit : News Kannada

ಕಾರ್ಕಳ: ಕಾರ್ಕಳವನ್ನು ಕೇಂದ್ರವನ್ನಾಗಿ ಮಾಡಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ ರಾಜ್ಯದಲ್ಲಿ ಹಿಂದೂ ಸಂಘಟನೆ ಹಾಗೂ ಹಿಂದುಗಳಿಗೆ ವಿಶ್ವಾಸ ಬರುವ ಹಾಗೆ ಅವರ ಜೊತೆ ಇರುತ್ತೇನೆ ಹಿಂದುತ್ವದ ಹೋರಾಟದಲ್ಲಿ ಭಾಗವಹಿಸುತ್ತೇನೆ. ಭ್ರಷ್ಟಾಚಾರದ ಪ್ರಕರಣಗಳನ್ನು ಉಲ್ಲೇಖ ಮಾಡುತ್ತಾ ಬಂದಿದ್ದೇನೆ ಅದು ಅರ್ಧಕ್ಕೆ ನಿಂತಿದೆ ಅದನ್ನು ಪೂರ್ಣ ಮಾಡುತ್ತೇನೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

ಅವರು ಪರಪ್ಪು ಸಮೀಪದ ಪಂಚಾಜನ್ಯ ತಮ್ಮ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶಾಸಕರು ವಿಜಯೋತ್ಸವ ಸಂದರ್ಭದಲ್ಲಿ ಕೆಲವೊಂದು ವಿಷಯ ಉಲ್ಲೇಖ ಮಾಡಿದ್ದಾರೆ. ಕಾಂಗ್ರೆಸ್ಸಿನ ಬಿ.ಟೀಮ್ ಹಾಗೂ ಕಾಂಗ್ರೆಸ್ ನಿಂದ ಚುನಾವಣೆಗೆ ಹಣ ಪಡೆದಿದ್ದೇವೆ ಎಂದು ಆರೋಪ ಮಾಡಿದ್ದಾರೆ. ಅವರು ಸಾಬೀತುಪಡಿಸಬೇಕು, ಇಲ್ಲದಿದ್ದರೆ ಕಾರ್ಕಳ ಮಾರಿಯಮ್ಮನ ಸನ್ನಿಧಿಗೆ ಬಂದು ಪ್ರಮಾಣ ಮಾಡಬೇಕು ಎಂದು ಆಗ್ರಹಿಸಿದರು ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು ಸರ್ಕಾರ ಮಾಡುವುದರಲ್ಲಿದೆ ನಾನು ಅವರಿಗೆ ಅಭಿನಂದಿಸುತ್ತೇನೆ ಎಲ್ಲಾದರೂ ಬಜರಂಗದಳ ನಿಷೇಧ, ಗೋ ಹತ್ಯೆ ನಿಷೇಧ, ಕಾನೂನುಗಳನ್ನು ಹಿಂದೆ ಪಡೆದರೆ ನಾನು ಮತ್ತು ಶ್ರೀರಾಮ ಸೇನೆ ಕಾರ್ಯಕರ್ತರು ದೇಶಾದ್ಯಂತ ಯಾವ ರೀತಿ ಪ್ರತಿಭಟನೆ ಮಾಡುತ್ತಿವೆ ಎಂದು ಅವರಿಗೆ ಊಹಿಸಲು ಅಸಾಧ್ಯವಾಗಬಹುದೆಂದು ಗುಡುಗಿದರು.

ಸುದ್ದಿಗೋಷ್ಠಿಯಲ್ಲಿ ಹರೀಶ್ ಅಧಿಕಾರಿ ವಿವೇಕಾನಂದ ಶೇಣೈ, ಮಹಿಳಾ ಅಧ್ಯಕ್ಷ ದಿವ್ಯ ನಾಯಕ್ ಉಪಸ್ಥಿತರಿದ್ದರು.

See also  ಮಡಿಕೇರಿ: ಅಕಾಲಿಕ ಮಳೆ, ಕಂಗಾಲಾದ ಕಾಫಿ ಬೆಳೆಗಾರರು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು