ಕುಂದಾಪುರ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬೈಂದೂರಿನ ವಿದ್ಯಾನಗರದಲ್ಲಿ ವಾಸ ಮಾಡುತ್ತಿರುವ ಸುಮಾರು 72 ವರ್ಷ ಪ್ರಾಯದ ನಾಗಮ್ಮ ಎನ್ನುವ ಅಶಕ್ತ ಹಿರಿಯ ಮಹಿಳೆಯ ವೈದ್ಯಕೀಯ ವೆಚ್ಚಕ್ಕೆ ದೇವಾಡಿಗ ಅಕ್ಷಯ ಕಿರಣ ಫೌಂಢೇಶನ್ ವತಿಯಿಂದ 15,000.ರೂ ಆರ್ಥಿಕ ನೆರವನ್ನು ವಿತರಿಸಲಾಯಿತು.
ಹಿರಿಯ ನೊಂದ ಜೀವಕ್ಕೆ ಆರ್ಥಿಕ ನೆರವನ್ನು ವಿತರಣೆಯನ್ನು ಮಾಡುವುದರ ಮುಖೇನ ದೇವಾಡಿಗ ಅಕ್ಷಯ ಕಿರಣ ಫೌಂಢೇಶನ್ ಸದಸ್ಯರು ಮಾನವೀಯತೆ ಮೆರೆದಿದ್ದಾರೆ,ಇದು ಅವರ 152ನೇ ಸೇವಾ ಕಾರ್ಯವಾಗಿದೆ.ದೇವಾಡಿಗ ಅಕ್ಷಯ ಕಿರಣ ಫೌಂಢೇಶನ್ ಸಂಘದ ಸದಸ್ಯರು ಅಜ್ಜಿಯ ಮನೆಗೆ ತೆರಳಿ ನೆರವನ್ನು ವಿತರಣೆ ಮಾಡಿದರು.