ಕುಂದಾಪುರ: ಬಹಳಷ್ಟು ಕೌತುಕದಿಂದ ಕೂಡಿದ ರಾಜ್ಯ ವಿಧಾನಸಭೆ ಕೌಂಟಿಂಗ್ ಒಂದಿಷ್ಟು ಅಹಿತಕರ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ.
ಬೈಂದೂರು ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಪರವಾಗಿರುವ ಏಜೆಂಟ್ ಉಡುಪಿಯಲ್ಲಿ ಮತ ಕೇಂದ್ರಕ್ಕೆ ತೆರಳುವಾಗ ಕಾಲಿಗೆ ಮೊಬೈಲ್ ಕಟ್ಟಿಕೊಂಡು ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.