News Karnataka Kannada
Wednesday, April 24 2024
Cricket
ಉಡುಪಿ

ಕುಂದಾಪುರ: ಸಪ್ತಪದಿ ತುಳಿದು ಸಪ್ತ ದಾನಕ್ಕೆ ದಂಪತಿಗಳ ಸಂಕಲ್ಪ

\Couple vows to donate saptapadi
Photo Credit : News Kannada

ಕುಂದಾಪುರ: ಶಾಸ್ತ್ರದಲ್ಲಿರುವ ಸಪ್ತ ಅರ್ಥ ಗರ್ಭಿತ ಹೆಜ್ಜೆಯ ಜೊತೆಯಲ್ಲಿ ಸಪ್ತ ಆದರ್ಶಗಳ ಸಂಕಲ್ಪವನ್ನು ಮಾಡುವ ಮುಖೇನ ಗಂಗೊಳ್ಳಿ ಹಿಂದೂ ಜಾಗರಣ ವೇದಿಕೆ ಸಂಚಾಲಕ ಯಶವಂತ್ ಗಂಗೊಳ್ಳಿ ದಾಂಪತ್ಯ ಜೀವನಕ್ಕೆ ಕಾ ಲಿರಿಸಿ ಸಮಾಜಕ್ಕೆ ಮಾದರಿ ಸಂದೇಶವನ್ನು ರವಾನಿಸಿದ್ದಾರೆ.

ಸಮಾಜ ಮುಖಿ ಚಿಂತನೆಗಳೊಂದಿಗೆ ಹಿಂದೂ ಜಾಗರಣವೇದಿಕೆಯ ಸಂಚಾಲಕರಾಗಿ ಕೆಲಸವನ್ನು ನಿರ್ವಹಿಸುತ್ತಿರುವ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ್ ಗಂಗೊಳ್ಳಿ ಅವರು ತಮ್ಮ ಮದುವೆ ದಿನವನ್ನು ಅವಿಸ್ಮರಣೀಯವಾಗಿ ಇರಿಸಬೇಕು ಎನ್ನುವ ದೃಷ್ಟಿಯಿಂದ ಏಳು ಮಹತ್ವದ ದಾನಗಳನ್ನು ಮಾಡಿ ಸಮಾಜಕ್ಕೆ ಮಾದರಿ ಆಗಿದ್ದಾರೆ. ಪತಿಯ ದಾನ ಪ್ರಕ್ರಿಯೆಗೆ ಪತ್ನಿ ಕೂಡ  ಸಾಥ್ ನೀಡಿದ್ದು ಅಂಗಾಂಗ ದಾನಕ್ಕೆ ಸಹಿ ಹಾಕಿ ನವ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.

ಏಳು ಪ್ರಮುಖ ದಾನಗಳು
1.ದಂಪತಿಗಳಿಂದ ಅಂಗಾಂಗ ದಾನಕ್ಕೆ ಸಹಿ
2.100 ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಜವಾಬ್ದಾರಿ
3.ಗೋ ದತ್ತು ಸ್ವೀಕಾರ
4.ರಕ್ತದಾನ
5.ಸೇನಾ ನಿಧಿಗೆ ಮೌಲ್ಯರ್ಪಣೆ
6.ರಾಮ ಮಂದಿರಕ್ಕೆ ಕಾಣಿಕೆ ಸಮರ್ಪಣೆ
7.ಮಂಗಳ ನಿಧಿ ಕಾರ್ಯಕ್ರಮ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು