ಕುಂದಾಪುರ: ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿನಮಕ್ಕಿ-ಆಲೂರುಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದು ನಿಂತ ಬೃಹತ್ ಗಾತ್ರದ ಅಕೇಶಿಯಾ ಮರಗಳು ರಸ್ತೆಗೆ ಒರಗಿಕೊಂಡು ನಿಂತಿದ್ದು ವಾಹನ ಸವಾರರಿಗೆ ಕಂಟಕವಾಗಿದೆ. ರಸ್ತೆಗೆ ಬಾಗಿ ಕೊಂಡಿರುವ ಮರಗಳನ್ನು ತೆರವು ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮೂಕಾಂಬಿಕಾ ಅಭಯಾರಣ್ಯದಲ್ಲಿ ಹಾದು ಹೋಗಿರುವ ಶ್ರೀ ಕ್ಷೇತ್ರ ಮಾರಣಕಟ್ಟೆಗೆ ನೆರವಾಗಿ ಸಂಪರ್ಕವನ್ನು ಕಲ್ಪಿಸುವ ಆಲೂರು-ಕಟ್ಟಿನಮಕ್ಕಿ ಮುಖ್ಯ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು ತಿರುಗಾಡುತ್ತಿರುತ್ತವೆ.ಆಲೂರು-ಕಟ್ಟಿನಮಕ್ಕಿ ಚುಟ್ಟಿಕೊಡ್ಲು ರಸ್ತೆಯ ಅಕ್ಕಪಕ್ಕಲ್ಲಿ ಸುಮಾರು ಅರ್ಧ ಕಿ.ಮೀ ವರೆಗೆ ದೊಡ್ಡ ದೊಡ್ಡ ಅಕೇಶಿಯಾ ಮರಗಳು ರಸ್ತೆಗೆ ಒರಗಿ ತಲೆ ಬಾಗಿ ನಿಂತ್ತಿವೆ.ಮಳೆ,ಗಾಳಿಯ ರಭಸಕ್ಕೆ ಯಾವುದೇ ಕ್ಷಣದಲ್ಲಿ ಆದರೂ ಉರುಳಿ ಬೀಳುವ ಹಂತದಲ್ಲಿದೆ,ರಸ್ತೆಗೆ ಬಾಗಿ ನಿಂತಿರುವ ಮರಗಳನ್ನು ಸಂಬಂಧಪಟ್ಟ ಇಲಾಖೆ ಆದಷ್ಟು ಬೇಗನೆ ತೆರವುಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕ್ಕೆನ್ನುವುದು ನಾಗರಿಕರ ಆಗ್ರಹವಾಗಿದೆ.