News Karnataka Kannada
Thursday, April 25 2024
Cricket
ಉಡುಪಿ

ಕುಂದಾಪುರ: ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ

Drinking water scarcity
Photo Credit : News Kannada

ಕುಂದಾಪುರ: ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರ್ಕೂರು ಗ್ರಾಮದ ಕಟ್ಟಿನಮಕ್ಕಿ ಕೆಳಹೊರ್ಣಿ ಎಸ್.ಸಿ ಕಾಲೋನಿ ಮತ್ತು ಹರ್ಕೂರು ಹೇರಿಗದ್ದೆ ಎಸ್.ಸಿ ಕಾಲೋನಿ ಭಾಗದದಲ್ಲಿ ಬಾವಿ ನೀರು ತಳ ಹಿಡಿದಿದ್ದು ಕುಡಿಯುವ ನೀರಿಗೆ ಆಹಾಕಾರ ಎದುರಾಗಿದೆ.

ಹರ್ಕೂರು ಕೆಳಹೊರ್ಣಿ ಎಸ್.ಸಿ ಕಾಲೋನಿಯಲ್ಲಿ ನಾಲ್ಕು ಕುಟುಂಬಗಳು ಮತ್ತು ಕಟ್ಟಿನಮಕ್ಕಿ ಹೇರಿಗದ್ದೆ ಎಸ್.ಸಿ ಕಾಲೋನಿಯಲ್ಲಿ ಐದು ಕುಟುಂಬಗಳು ವಾಸಮಾಡುತ್ತಿದ್ದಾರೆ.ಈ ಭಾಗದ ಪರಿಸರದಲ್ಲಿದ್ದ ಸರಕಾರಿ ಬಾವಿ ನೀರು ತಳಹಿಡಿದಿದೆ,ಕೊಳವೆ ಬಾವಿ ನೀರು ಕುಡಿಯಲು ಯೊಗ್ಯವಾಗಿಲ್ಲ. ಸರಕಾರಿ ಬಾವಿ ನೀರಿನ ಆಶ್ರಯದಲ್ಲೇ ಬದುಕನ್ನು ಕಟ್ಟಿಕೊಂಡಿರುವ ಎಸ್.ಸಿ ಕಾಲೋನಿ ಭಾಗದ ಜನರಿಗೆ ಬಾವಿ ನೀರು ಬರಿದಾಗಿದ್ದರಿಂದ ಕಳೆದ 15 ದಿನಗಳಿಂದ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ.ಹನಿ ನೀರಿಗೂ ಪರಿತಪಿಸುವಂತೆ ಆಗಿದ್ದು,ಕುಡಿಯಲು ನೀರನ್ನು ಒದಗಿಸಿ ಕೊಡುವಂತೆ ಪಂಚಾಯತ್ ಸದಸ್ಯರ ಬಳಿ ಹಲವಾರು ಬಾರಿ ಹೇಳಿದ್ದರೂ ಯಾವುದೇ ರೀತಿಯ ಪ್ರಯೋಜನೆ ಆಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು