ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.
ಗುರುರಾಜ್ ಗಂಟಿಹೊಳೆ ಅವರು ಆರಂಭದ ಕೆಲ ಸುತ್ತುಗಳಲ್ಲಿ ಹಿನ್ನೆೆಡೆ ಅನುಭವಿಸಿದ್ದರೂ ಅನಂತರದಲ್ಲಿ ಚೇತರಿಕೆ ಕಂಡುಕೊಂಡು ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಅವರ ವಿರುದ್ಧವಾಗಿ 16,153 ಮತಗಳ ಅಂತರದಲ್ಲಿ ಜಯ ದಾಖಲಿಸಿದ್ದಾರೆ.
ಗುರುರಾಜ್ ಗಂಟಿಹೊಳೆಯವರು 98,628 ಮತಗಳನ್ನು ಹಾಗೂ ಕೆ. ಗೋಪಾಲ ಪೂಜಾರಿಯವರು 82,475 ಮತಗಳನ್ನು ಪಡೆದರು.ಸುಕುಮಾರ ಶೆಟ್ಟಿ ಮತ್ತು ಕಾಂಗ್ರೆಸ್ ಪಕ್ಷದ ಒಳ ಒಪ್ಪಂದವು ಬಿಜೆಪಿ ಪಕ್ಷದ ಗೆಲುವನ್ನು ತಡೆಯಲು ಸಾಧ್ಯವಾಗಿಲ್ಲ.ಕಾರ್ಯಕರ್ತರ ಹೋರಾಟದ ಫಲವಾಗಿ ಗುರುರಾಜ್ ಗಂಟಿಹೊಳೆ ಅವರಿಗೆ ದೊಡ್ಡ ಅಂತರದ ದೊಡ್ಡ ಮಟ್ಟದ ಜಯ ದೊರೆತ್ತಿದೆ.