ಕುಂದಾಪುರ: ಕರಾವಳಿ ತೀರ ಪ್ರದೇಶವು ಬಿಸಿಲ ಬೇಗೆಯಿಂದ ಕೊತ ಕೊತ ಕುದಿಯುತ್ತಿದೆ ಕೆಲವು ದಿನಗಳಿಂದ ಬೈಂದೂರು ಮತ್ತು ಕುಂದಾಪುರದ ಭಾಗದಲ್ಲಿ ತಾಪಮಾನದಲ್ಲಿನ ಉಷ್ಣಾಂಶ ದಿನ ದಿನವೂ ಏರಿಕೆ ಆಗುತ್ತಿದೆ,ರಣ ಬಿಸಿಲಿಗೆ ಕಂಗೆಟ್ಟ ಜನ ದಾಹವನ್ನು ನಿವಾರಿಸಿಕೊಳ್ಳಲು ತಂಪು ಪಾನಿಗಳ ಸೇವನೆಗೆ ಮೊರೆ ಹೋಗಿದ್ದಾರೆ.
ಬಿಸಿಲ ಧಗೆಯಿಂದ ದಾಹವನ್ನು ನಿವಾರಿಸಿಕೊಳ್ಳಲು ಜನರು ಸೀಯಾಳ ಸೇವನೆಯತ್ತಾ ಮುಖ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ ಸೀಯಾಳಕ್ಕೆ ಭರ್ಜರಿ ಡಿಮ್ಯಾಂಡ್ ವ್ಯಕ್ತವಾಗಿದೆ.ಸಹಜವಾಗಿ ದರವು ಕೂಡ ಏರಿಕೆ ಖಂಡಿದೆ. ಎಪ್ರಿಲ್ ತಿಂಗಳಿನಲ್ಲಿ 30.ರೂ ಗೆ ಸಿಗುತ್ತಿದ್ದ ಸೀಯಾಳ, ಮೇ.ತಿಂಗಳಿನಲ್ಲಿ ದರ ಜಿಗಿತಗೊಂಡಿದ್ದು 35 ರಿಂದ 40.ರೂ ಗಳಿಗೆ ವ್ಯಾಪಾರವಾಗುತ್ತಿದೆ. ದುಡ್ಡು ಕೊಟ್ಟರು ಸೀಯಾಳ ಸಿಗದಂತಹ ಪರಿಸ್ಥಿತಿ ಎದುರಾಗಿದ್ದು ಮಾರುಕಟ್ಟೆಯಲ್ಲಿ ಸೀಯಾಳದ ಅಭಾವ ಕಾಡುತ್ತಿದೆ.