ಕುಂದಾಪುರ: ಮಂಡ್ಯದಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಶಿರಿಯಾರ ಗ್ರಾಮದ ತೆಂಕಬೈಲು ನಿವಾಸಿ ದಿನಕರ ಶೆಟ್ಟಿ (32) ಕಾಣೆಯಾಗಿದ್ದಾರೆ.
ಕೆಲಸದಿಂದ ಮನೆಗೆ ಮರಳಿದ ಅವರು ಎರಡು ದಿನಗಳ ಕಾಲ ಮನೆಯಲ್ಲಿ ಇದ್ದು ನಂತರ ಮಂಡ್ಯಕ್ಕೆ ಕೆಲಸಕ್ಕೆಂದು ಹೋದವರು ಕೆಲಸಕ್ಕೆ ಹೋಗದೆ ನಾಪತ್ತೆಯಾಗಿದ್ದಾರೆ.ಅವರ ಸಂಬಂಧಿಗಳು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.