ಉಡುಪಿ: ಮಂಗಳೂರು ಹಾಗೂ ಮುಂಬಯಿ ಮಧ್ಯೆ ಓಡಾಡುವ ಮತ್ಸ್ಯ ಗಂಧ ಎಕ್ಸ್ಪ್ರೆಸ್ ರೈಲಿಗೆ 2023ರ ಮೇ 1ಕ್ಕೆ ಈ ಮಾರ್ಗದಲ್ಲಿ ಸಂಚಾರವನ್ನು ಆರಂಭಿಸಿ 25 ವರ್ಷ ಪೂರ್ಣಗೊಳ್ಳಲಿದೆ.
ಮತ್ಸ್ಯ ಗಂಧ ಎಕ್ಸ್ಪ್ರೆಸ್ ರೈಲು 1998ರ ಮೇ 1ರಂದು ತನ್ನ ಮೊದಲ ದಿನದ ಓಡಾಟ ಆರಂಭಿಸಿತ್ತು. ಉಡುಪಿ ರೈಲು ಯಾತ್ರಿ ಸಂಘವು ಈ ಅವಿಸ್ಮರಣೀಯ ರೈಲು ಓಡಾಟವನ್ನು ವಿಶೇಷ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಮೇ 1ರ ಮಧ್ಯಾಹ್ನ 3.48ಕ್ಕೆ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು ಉಡುಪಿ ತಲುಪಲಿದೆ.
ಅಂದು ರೈಲಿನ ಎಂಜಿನ್ ಎದುರುಗಡೆ, ಸಂಘದ ಪರವಾಗಿ ಬ್ಯಾನರ್ ಒಂದನ್ನು ಕಟ್ಟಿ, ಆ ರೈಲಿನ ಇಬ್ಬರು ಲೋಕೋ ಪೈಲೆಟ್ ಹಾಗೂ ಗಾರ್ಡ್ಗೆ ಹೂ ಗುಚ್ಛ ನೀಡಿ, ಆನಂತರ ಅಲ್ಲಿದ್ದವರಿಗೆ ಸಿಹಿ ತಿಂಡಿ ನೀಡಿ ಸಂಭ್ರಮಿಸಲಿದೆ ಎಂದು ಸಂಘದ ಅಧ್ಯಕ್ಷ ಶೇಖರ್ ಕೋಟ್ಯಾನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.