ಕುಂದಾಪುರ: ಹುಟ್ಟಿದ 3-4ದಿನದ ಗಂಡು ಕರುಗಳನ್ನು ಅಪರಿಚಿತರು ಕಾಡಿನಲ್ಲಿ ಬಿಟ್ಟು ಹೋಗಿದ್ದ ಘಟನೆ ಬೈಂದೂರು ತಾಲೂಕಿನ ಹೇರೂರು ಗ್ರಾಮದ ಯರುಕೋಣೆ ಸಮೀಪದ ಆಲ್ ಗೆದ್ದಕೇರಿಯಲ್ಲಿ ನಡೆದಿದೆ.
ಹೈಬ್ರಿಡ್ ಜಾತಿಗೆ ಸೇರಿದ ಸುಮಾರು 10 ರಿಂದ 12 ಗೋವಿನ ಗಂಡು ಕರುಗಳನ್ನು ಅಪರಿಚಿತರು ವಾಹನದಲ್ಲಿ ತಂದು ಯರುಕೋಣೆ ಸಮೀಪದ ಆಲಗೆದ್ದಕೇರಿಯ ಕಲ್ಲುಪಾರಿಗಳ ಮಧ್ಯೆ ಬಿಟ್ಟು ಹೋಗಿದ್ದಾರೆ.ಎರಡ ರಿಂದ ಮೂರು ದಿನಗಳ ಹಿಂದೆ ಕರುಗಳ ಜನನವಾಗಿರ ಬಹುದೆಂದು ಸ್ಥಳೀಯರು ಅಂದಾಜಿಸಿದ್ದಾರೆ.
ಹೈ ಬ್ರಿಡ್ ಜಾತಿಯ ಗಂಡು ಕರುಗಳಿಗೆ ಬೆಲೆ ಇಲ್ಲದೆ ಇರುವುದರಿಂದ ಅನಾವಶ್ಯಕವಾಗಿ ಸಾಕಬೇಕು ಎನ್ನುವ ಉದ್ದೇಶದಿಂದ ಈ ಕೃತ್ಯವನ್ನು ಕೀಚಕರು ಎಸೆದಿದ್ದಾರೆ, ಹಾರವಿಲ್ಲದೆ ಎರಡು ಹಸುವಿನ ಕರುಗಳು ಮೃತಪಟ್ಟಿವೆ, ಗೋ ರಕ್ಷಕರ ನಾಡಿನಲ್ಲಿ ಅವಮಾನೀಯ ದೃಶ್ಯ ನೋಡುಗರ ಕಣ್ಣಿಗೆ ಸಾಕ್ಷಿಯಾಗಿದ್ದು, ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಇದೆ. ಇದೊಂದು ನಾಚಿಕೆಗೇಡಿತನದ ಸಂಗತಿ ಆಗಿದೆ ಎಂದು ಸ್ಥಳೀಯರು ದುರುಳರ ವಿರುದ್ಧ ಕಿಡಿ ಕಾರಿದ್ದಾರೆ.
ಸ್ಥಳೀಯ ಶಿಕ್ಷಕರಾದ ಜಯಪ್ರಕಾಶ ಶೆಟ್ಟಿ ಮಾತನಾಡಿ ನಾನು ಶಾಲೆಯಿಂದ ಮನೆಗೆ ಬರುವ ಸಮಯದಲ್ಲಿ ಗಂಡು ಕರುಗಳ ಕೂಗಾಟ ಕೇಳಿಸಿದ್ದು ಕಲ್ಲುಪಾರಿಗಳ ಒಳಗೆ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.
ನೀರು,ಆಹಾರವಿಲ್ಲದೆ 2 ಕರುಗಳು ಸುತ್ತು ಹೋಗಿದೆ. ಕೆಲವು ಕರುಗಳು ಹಸಿವಿನಿಂದ ನಿತ್ರಾಣ ಗೊಂಡಿದ್ದು ಸ್ಥಳೀಯರು ನೀರು ಕುಡಿಸಿ, ಹುಲ್ಲು ನೀಡಿ ಉಪಚರಿಸಿದ್ದರು.ಬುದ್ದಿವಂತರ ನಾಡಿನಲ್ಲಿ ಇಂತಹ ಘಟನೆಗಳು ನಡೆದಿರುವುದು ನೋವಿನ ಸಂಗತಿ ಆಗಿದೆ ಎಂದರು.
ಬೈಂದೂರು ಪಶುವೈದ್ಯಾಧಿಕಾರಿ ನಾಗರಾಜ್ ಅವರು ಕರುಗಳಿಗೆ ಚಿಕಿತ್ಸೆಯನ್ನು ನೀಡಿ ಉಪಚರಿಸಿದರು. ಸ್ಥಳೀಯರಾದ ನಾಗೇಶ್ ಯರುಕೋಣೆ ಅವರು ತಮ್ಮ ಮನೆಯಲ್ಲಿ ಕರುಗಳನ್ನು ಕಟ್ಟಿಕೊಂಡು ನೀರು, ಹುಲ್ಲು ನೀಡಿ ತಾತ್ಕಾಲಿಕವಾಗಿ ಕರುಗಳ ಆರೈಕೆ ಮಾಡಿದರು.
ಜನಪ್ರತಿನಿಧಿಗಳು ಮತ್ತು ವಿಶ್ವ ಹಿಂದೂ ಪರಿಷತ್ ಮತ್ತು ಸ್ಥಳೀಯರ ಸಹಕಾರದಿಂದ ಹಸುವಿನ ಕರುಗಳನ್ನು ಗೋಶಾಲೆ ರವಾನಿಸಲು ಕ್ರಮಗಳನ್ನು ಕೈಗೊಂಡರು.
ವರದಿ-ಜಗದೀಶ್ ದೇವಾಡಿಗ,ಮುಳ್ಳಿಕಟ್ಟೆ