ಉಡುಪಿ: ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎನ್ನುವುದು ಅತ್ಯಂತ ಆಘಾತಕಾರಿ ವಿಷಯ. ಇದು ಬಹಳ ಆಶ್ಚರ್ಯ ತಂದಿದೆ. ಇದು ಕಾಂಗ್ರೆಸ್ ನ ಶವದ ಪೆಟ್ಟಿಗೆಗೆ ಕೊನೆಯ ಮೊಳೆ ಎಂದು ಚಿತ್ರನಟಿ, ಬಿಜೆಪಿ ನಾಯಕಿ ತಾರಾ ಕಿಡಿಕಾರಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ದೇಶಗಳಲ್ಲಿ ಒಂದೊಂದು ಧರ್ಮ ಗಟ್ಟಿಯಾಗಿ ನಿಂತಿದೆ. ಕ್ರಿಶ್ಚಿಯನ್, ಮುಸ್ಲಿಮರಿಗೆ ಪ್ರಾಧಾನ್ಯತೆ ಕೊಡುವ ದೇಶಗಳಿವೆ. ಆದ್ರೆ ಹಿಂದೂಗಳಿಗೆ ಹಿಂದೂಸ್ತಾನ ಮಾತ್ರ ಇರುವುದು. ಇಲ್ಲಿಯೂ ಕೂಡ ಹಿಂದೂಗಳಿಗೆ ಪೂಜೆ ಮಾಡಬೇಡಿ, ಬೆಂಬಲ ಕೊಡಬೇಡಿ ಎಂದು ಎಷ್ಟು ಹೇಳುತ್ತೀರಿ. ಎಷ್ಟು ಹಿಂಸೆ ಕೊಡ್ತೀರಿ. ಪ್ರಪಂಚದಲ್ಲಿ ಯಾವುದಾದ್ರೂ ಬೇರೆ ಹಿಂದೂ ದೇಶಗಳು ಇದ್ದಾವೆಯೇ.?. ಬೇರೆ ಬೇರೆ ಧರ್ಮಗಳನ್ನು ಎತ್ತಿ ಹಿಡಿಯುವ ದೇಶಗಳು ಇದ್ದಾವೆ. ಇಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಸಂತೋಷವಾಗಿ ಇದ್ದಾರೆ. ಅವರಿಂದ ಯಾವುದೇ ತೊಂದರೆ ಇಲ್ಲ ಎಂದರು.