News Karnataka Kannada
Friday, April 26 2024
ಉಡುಪಿ

ಪ್ರಧಾನಿ ನರೇಂದ್ರ ಮೋದಿ ಅಂದರೆ ಅಭಿವೃದ್ಧಿ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Shobha Karandlaje likely to be appointed as BJP state unit president in place of Kateel
Photo Credit : News Kannada

ಕುಂದಾಪುರ: ವಾರಂಟಿ ಇಲ್ಲದ ಗ್ಯಾರಂಟಿ ಕಾರ್ಡ್ ಕಾಂಗ್ರೆಸ್ ಪಕ್ಷದ ಬದುಕಾಗಿದೆ, ಹತ್ತು ವರ್ಷಗಳ ಕಾಲ ಆಳಿದ ಕಾಂಗ್ರೆಸ್ ನೇತೃತ್ವದ ಮನಮೋಹನ್ ಸಿಂಗ್ ಸರಕಾರದ ಒಂದು ಅಭಿವೃದ್ಧಿ ಕೆಲಸವನ್ನು ಕಾಂಗ್ರೆಸ್ ಉದಾಹರಣೆ ಕೊಡಲಿ.ಮೋದಿ ಎಂದರೆ ಅಭಿವೃದ್ಧಿ ಎನ್ನುವುದು ಜನರಿಗೆ ನೆನಪಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕುಂದಾಪುರ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಅವರ ಪರವಾಗಿ ಚುನಾವಣಾ ಪ್ರಚಾರದ ಕಾರ್ಯದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಸಿದ್ದರಾಮಯ್ಯನವರು ತಮ್ಮ ಆಡಳಿತದ ಅವಧಿಯಲ್ಲಿ ಸಮಾಜವನ್ನು ಒಡೆದು ಆಳುವ,ಧರ್ಮ ಧರ್ಮದ ನಡುವೆ ಜಗಳನ್ನು ತಂದೊಡ್ಡುವ ಕೆಟ್ಟ ಆಡಳಿತವನ್ನು ನೀಡಿದ್ದಾರೆ. ಇವತ್ತು ಸಹ ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡದೆ ಟಿಪ್ಪು ಯುನಿವರ್ಸ್‍ಸಿಟಿ ಯನ್ನು ಜಾರಿಗೆ ತರುತ್ತೇವೆ ಎನ್ನುವುದರ ಮೂಲಕ ಧರ್ಮದ ಕಲಹಕ್ಕೆ ನಾಂದಿಯನ್ನು ಹಾಡುತ್ತಿದ್ದಾರೆ. ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದೆ ಅವರ ಪೊಳ್ಳು ಭರವಸೆಗಳಿಗೆ, ಗ್ಯಾರಂಟಿ ಕಾರ್ಡಿಗೆ ಬೆಲೆ ಇಲ್ಲಾ ಎಂದರು.

ಮೋದಿ ಅವರನ್ನು ದೂಷಣೆ ಮಾಡುವುದೆ ಕಾಂಗ್ರೆಸ್ ಅಜೆಂಡಾವಾಗಿದೆ,ನಮ್ಮದು ಅಭಿವೃದ್ಧಿ ಅಜೆಂಡಾ. ಡಬ್ಬಲ್ ಇಂಜಿನ್ ಸರಕಾರದಿಂದ ಕರ್ನಾಟಕವು ಅಭಿವೃದ್ಧಿ ಪಥದತ್ತಾ ಸಾಗಿದೆ. 130 ಕ್ಕೂ ಹೆಚ್ಚಿನ ಸೀಟ್ ಗೆಲ್ಲುವ ಮುಖೇನ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದೇವೆ, ಉಡುಪಿಯಲ್ಲಿ 5 ಸೀಟ್ ಅನ್ನು ಗೆಲ್ಲಲಿದ್ದು, ಕುಂದಾಪುರದಲ್ಲಿ ಕಿರಣ್ ಕುಮಾರ್ ಕೊಡ್ಗಿ ಅವರು ಅಧಿಕ ಮತಗಳಿಂದ ಜಯಗಳಿಸಲಿದ್ದಾರೆ ಎಂದರು.

ಮೋದಿ ಕೈ ಬಲಪಡಿಸಲು ಬಿಜೆಪಿಗೆ ಓಟ್ ನೀಡಬೇಕೆಂದು ಮತದಾರರಲ್ಲಿ ಕೇಳಿಕೊಂಡರು. ಶ್ಯಾಮಲ ಕುಂದರ್,ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು