ಉಡುಪಿ: ಉಡುಪಿಯ ಮತ ಎಣಿಕಾ ಕೇಂದ್ರಕ್ಕೆ ತನ್ನ ಲುಂಗಿಯಲ್ಲಿ ಮೊಬೈಲ್ ಅಡಗಿಸಿಟ್ಟು ಕೊಂಡು ಬಂದ ವ್ಯಕ್ತಿಯನ್ನು ಹೊರ ಕಳಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಈ ವ್ಯಕ್ತಿ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರ ಏಜೆಂಟ್ ಎಂದು ತಿಳಿದುಬಂದಿದೆ. ಕೇಂದ್ರದೊಳಗೆ ಮೊಬೈಲ್ ನಿರ್ಬಂಧ ವಿಧಿಸಿದ್ದರೂ ಈ ವ್ಯಕ್ತಿ ತನ್ನ ಲುಂಗಿಯಲ್ಲಿ ಮೊಬೈಲ್ ಅನ್ನು ಕಟ್ಟಿಕೊಂಡು ಬಂದಿದ್ದರನ್ನಲಾಗಿದೆ.
ಮೊದಲ ಪ್ರವೇಶದಲ್ಲಿ ಪೊಲೀಸರ ಗಮನಕ್ಕೆ ಬಾರದಂತೆ ಒಳಗೆ ಬಂದ ಈ ವ್ಯಕ್ತಿಯನ್ನು ಎರಡನೇ ದ್ವಾರದಲ್ಲಿ ಪೊಲೀಸರು ತಪಾಸಣೆಗೆ ಒಳಪಡಿಸಿದರು. ಈ ವೇಳೆ ಖುದ್ದು ಎಸ್ಪಿ ಅಕ್ಷಯ ಹಾಕೇ ಮಚ್ಚಿಂದ್ರ ಸ್ಥಳದಲ್ಲಿದ್ದರು.
ತಪಾಸಣೆ ನಡೆಸಿದಾಗ ಆ ವ್ಯಕ್ತಿಯ ಲುಂಗಿಯಲ್ಲಿ ಮೊಬೈಲ್ ಕಟ್ಟಿರುವುದು ಪತ್ತೆಯಾಗಿದೆ. ಬಳಿಕ ಆ ವ್ಯಕ್ತಿಯನ್ನು ಕೇಂದ್ರದಿಂದ ಹೊರಗೆ ಕಳುಹಿಸಲಾಯಿತು ಎಂದು ತಿಳಿದುಬಂದಿದೆ.