News Karnataka Kannada
Thursday, March 28 2024
Cricket
ಉಡುಪಿ

ಉಡುಪಿ: ಸರಕಾರಿ ಶಾಲೆಗಳಿಗೂ ತಟ್ಟಿದ ಕುಡಿಯುವ ನೀರಿನ ಸಮಸ್ಯೆ, ವಿದ್ಯಾರ್ಥಿಗಳ ಪರದಾಟ

Udupi: Drinking water crisis in government schools: Students
Photo Credit : News Kannada

ಉಡುಪಿ: ನಗರದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸಿದ್ದು, ಜನರು‌ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಇದೀಗ ಸರಕಾರಿ ಶಾಲೆಗಳಲ್ಲೂ‌ ತೀವ್ರ ನೀರಿನ ಅಭಾವ ಉಂಟಾಗಿದೆ.

ನಗರದ ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಗೂ‌ ನೀರಿನ ಸಮಸ್ಯೆ ಕಾಡಿದ್ದು, ವಿದ್ಯಾರ್ಥಿಗಳು ನೀರಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.

ಈ ಶಾಲೆಯೂ ಬಾವಿಯ ನೀರನ್ನೇ ಬಹುತೇಕವಾಗಿ ಅವಲಂಬಿಸಿಕೊಂಡಿತ್ತು. ಆದರೆ, ಮುಂಗಾರು‌ಪೂರ್ವ ಮಳೆಯ ಅಭಾವದಿಂದಾಗಿ ಬಾವಿ ನೀರು ಬತ್ತಿದೆ. ಇದರಿಂದ ಮಕ್ಕಳ ಶೌಚ ,ಕುಡಿಯಲು ಶುದ್ಧ ನೀರು, ಊಟ ತಿಂಡಿ ಮಾಡಿ ಶುಚಿಗೊಳಿಸುವುದಕ್ಕೆ ಸಾಕಷ್ಟು ನೀರಿನ ಅಗತ್ಯ ಇದೆ. ಆದರೆ ಬೇಸಿಗೆ ಮಳೆ ಬಾರದ ಹಿನ್ನೆಲೆಯಲ್ಲಿ ನೀರಿನ‌ ಕೊರತೆ ಶಾಲಾ ವಿದ್ಯಾರ್ಥಿಗಳಿಗೂ ತಟ್ಟಿದೆ.

ನಗರಸಭೆಯ ಅರ್ದಂಬರ್ಧ ಯೋಜನೆಗಳು ,ಕುಡಿಯುವ ನೀರಿನ ಯೋಜನೆಯಲ್ಲಿನ ವಿಳಂಬವೇ ಈ ಸಮಸ್ಯೆಗೆ ಕಾರಣವಾಗಿದೆ. ಕಳೆದ ವಾರ ಜಿಲ್ಲಾಸ್ಪತ್ರೆಯಲ್ಲೂ ನೀರಿನ‌ ಕೊರತೆ ಉಂಟಾಗಿ ರೋಗಿಗಳಿಗೆ ಸಮಸ್ಯೆ ಉಂಟಾಗಿತ್ತು.ಈಗ ಶಾಲೆಗೂ ಈ ಸಮಸ್ಯೆ ತಟ್ಟಿದ್ದು ದುರದೃಷ್ಟಕರ. ಸ್ಥಳೀಯಾಡಳಿತ ಮತ್ತು ಶಾಸಕರು ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಹಳೆವಿದ್ಯಾರ್ಥಿ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು