ಉಡುಪಿ: ಕಳೆದ ನಲವತ್ತು ವರ್ಷಗಳ ಹಿಂದೆ ಮನೆ ಬಿಟ್ಟು ಬಂದಿದ್ದ ವ್ಯಕ್ತಿಯನ್ನು ಕೊನೆಗೂ ಮನೆಯವರು ಜೀವಂತವಾಗಿ ನೋಡಲು ಸಾಧ್ಯವಾಗಿಲ್ಲ. ಶವವಾಗಿ ಸಿಕ್ಕಿದ್ದು ಮಾತ್ರ ದುರಂತವೇ ಸರಿ.
ಮೃತ ವ್ಯಕ್ತಿಯನ್ನು ಕೋಟತಟ್ಟು ಪಡುಕೆರೆಯ ನಿವಾಸಿ ನಾರಾಯಣ ಪೂಜಾರಿ ಎಂದು ಗುರುತಿಸಲಾಗಿದೆ. ಇವರು ಮನೆಬಿಟ್ಟು ಬರೋಬ್ಬರಿ ನಲ್ವತ್ತು ವರ್ಷಗಳಾಗಿತ್ತು. ಅಂದಿನಿಂದ ಸಾಯುವ ಕೊನೆ ಕ್ಷಣದವರೆಗೂ ಮನೆಯವರ ಮುಖ ನೋಡಲು ಆಗದಿರುವುದು ಮಾತ್ರ ದುರ್ವಿಧಿಯೇ ಸರಿ. ಇವರು ಉಡುಪಿ ಪರಿಸರದಲ್ಲಿ ಕೂಲಿ ಕಾರ್ಮಿಕನಾಗಿ ಜೀವನ ಸಾಗಿಸುತ್ತಿದ್ದು, ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಲು ಅಸಹಾಯಕತೆ ಎದುರಾದಾಗ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಇಂದ್ರಾಳಿಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಿಕೊಡುವ ಮೂಲಕ ಮಾನವೀಯತೆ ಮೆರೆದರು. ಉಡುಪಿ ನಗರ ಠಾಣೆಯ ಪೊಲೀಸರು ಕಾನೂನು ಪ್ರಕ್ರಿಯೆ ನಡೆಸಿದರು.